ವಿಷಯಕ್ಕೆ ಹೋಗಿ

ಉತ್ತರವಿಲ್ಲದ ಪ್ರಶ್ನೆಗಳು



ಈ ಘಟನೆ ನಡೆದದ್ದು ಜನವರಿ 13, 2007 ರಂದು. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆಯೋಜಿಸಿದ್ದ ಮೂರು ದಿನಗಳ ಥಿಂಕ್ ಇಂಡಿಯಾ ಎಂಬ ಕಾರ್ಯಕ್ರಮದಲ್ಲಿ.

ಇಡೀ ಕಾರ್ಯಕ್ರಮ 'ಆಧ್ಯಾತ್ಮ ಮತ್ತು ರಾಷ್ಟ್ರದ ಪ್ರಗತಿ' ಎಂಬ ವಿಶಯದ ಮೇಲೆ ಕೇಂದ್ರಿತವಾಗಿತ್ತು. ಆ ದಿನ ಬೆಳಿಗ್ಗೆ ಕೇರಳದ ವಿಜಯ್ ಮೆನನ್ ಅವರ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಾದನೆಯ ಬಗ್ಗೆ ಭಾಷಣವನ್ನು ಕೇಳಿದ ಸುಮಾರು ಒಂದು ಸಾವಿರದಷ್ಠಿದ್ದ ಯುವಜನತೆ ರೋಮಾಂಚಿತಗೊಂಡಿತ್ತು.

ಅವರ ಭಾಷಣದಲ್ಲಿನ ಎರಡು ವಿಚಾರಗಳು ಮನಮುಟ್ಟುವಂತಿದ್ದವು: ವಿವೇಕಾನಂದರು ತಮ್ಮ ಚಿಕಾಗೋ ಉಪನ್ಯಾಸದಲ್ಲಿ "ನಾನು ಸ್ವಾಮಿ ವಿವೇಕಾನಂದ, ನಾನು ಭಾರತದಿಂದ ಬಂದಿದ್ದೇನೆ" ಅಂತ ಒಮ್ಮೆಯೂ ಹೇಳಿಕೊಳ್ಳಲಿಲ್ಲ. ಬಡಲಿಗೆ ಅವರು "ಜಗತ್ತಿಗೇ ವಿಶ್ವಭ್ರಾತ್ರ ತ್ವ ಮತ್ತು ವಿಶ್ವಶಾಂತಿಯ ಸಂದೇಶ ನೀಡಿದ ಮಹಾನ್ ಪರಂಪರೆಯ ಪ್ರತಿನಿಧಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ" ಅಂತ ಹೇಳಿದ್ದರು. ಇದು ವಿವೇಕಾನಂದರ ನಿರಹಂಕಾರ ಸ್ಥಿತಿಯನ್ನು ತೋರಿಸುತ್ತದೆ. ಇವತ್ತು ಬಹುತೇಕ ಭಾಷಣಕಾರರು ತಮ್ಮ ಭಾಷಣವನ್ನು 'ನನ್ನ ಸಹೋದರ ಸಹೋದರಿಯರೇ' ಅಂತಲೇ ಆರಂಭಿಸುತ್ತಾರೆ. ಆದರೆ ಅವರುಗಳ ಈ ರೀತಿಯ ಆರಂಭಕ್ಕೆ ಯಾರೂ ಚಪ್ಪಾಳೆ ತಟ್ಟುವುದಿಲ್ಲ.

ಆದರೆ ವಿವೇಕಾನಂದರು ಚಿಕಾಗೋ ಉಪನ್ಯಾಸದ ಆರಂಭದಲ್ಲಿ "ಅಮೆರಿಕದ ನನ್ನ ಸಹೋದರ ಸಹೋದರಿಯರೇ" ಅಂತ ಹೇಳಿದ್ದು ನೆರೆದಿದ್ದವರ ಮೈಮನವನ್ನು ತಟ್ಟಿತ್ತು. ಕಾರಣ ಇಷ್ಟೆ. ವಿವೇಕಾನಂದರಿಗೆ ಜಗತ್ತಿನ ಪ್ರತಿಯೊಬ್ಬರನ್ನೂ ಸಹೋದರ ಅಥವಾ ಸಹೋದರಿಯ ರೂಪದಲ್ಲಿ ನೋಡುವ ಶುದ್ಧ ಮನಸ್ಸಿತ್ತು. ಇಂದು ವಿವೇಕಾನಂದರ ಭಾಷಣದ ಸಾಲನ್ನು ನಕಲು ಮಾಡಿ ತಮ್ಮ ಭಾಷಣ ಆರಂಭಿಸುವ ಅನೇಕರಿಗೆ ಜಗತ್ತಿನ ಪ್ರತಿಯೊಬ್ಬರನ್ನೂ ತಮ್ಮ ಸಹೋದರ ಅಥವಾ ಸಹೋದರಿಯ ರೂಪದಲ್ಲಿ ನೋಡುವ ಮನಸ್ಸಿಲ್ಲ. ಸುಮ್ಮನೆ ಬಾಯುಪಚಾರಕ್ಕೆ 'ಸಹೋದರ ಸಹೋದರಿಯರೇ' ಅಂತ ಹೇಳಿದರೆ ಅದು ಯಾರಿಗೂ ಪ್ರಿಯವಾಗುವುಡಿಲ್ಲ ಅಂದಿದ್ದರು ವಿಜಯ್ ಮೆನನ್.

ಮೂರು ದಿನಗಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆರ್ಟ್ ಆಫ್ ಲಿವಿಂಗ್ ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು “ಇಂದಿನ ಯುವಕರು ದೇಶವಿರೋದಿ ಕಾರ್ಯವೆಸಗಿ ಪೋಲೀಸರ ಗುಂಡಿಗೆ ಬಲಿಯಾಗುವ ನಕ್ಸಲೀಯರ ಬಗ್ಗೆ ಅನುಕಂಪ ಸೂಚಿಸಬಲ್ಲರು. ಆದರೆ ಸೈನಿಕರ ಬಲಿದಾನದ ಬಗ್ಗೆ ಯುವಕರ ಕಣ್ಣಲ್ಲಿ ನೀರು ಜಿನುಗುವುದು ಅಪರೂಪ” ಎಂದು ವಿಷಾದ ವ್ಯಕ್ತಪಡಿಸಿದ್ದರು.

ರವಿಶಂಕರರ ಭಾಷಣ ಮುಗಿಯುತ್ತಿದ್ದಂತೆಯೇ ವೇದಿಕೆಯತ್ತ ನುಗ್ಗಿ ಬಂದ ಮಹಿಳೆಯೊಬ್ಬರು “ನನ್ನ ಪತಿ ಈಗ ಕೆಲವೇ ತಿಂಗಳ ಹಿಂದೆ ಕಾಶ್ಮೀರದಲ್ಲಿ ಉಗ್ರಗಾಮಿಗಳ ಗುಂಡಿಗೆ ಬಲಿಯಾದರು. ಆ ಹೊತ್ತಿನಲ್ಲಿ ನನ್ನ ಕುಟುಂಬದ ಕಣ್ಣೀರೊರೆಸಲು ಯಾರೂ ಇರಲಿಲ್ಲ. ಇವತ್ತು ನಾವೆಲ್ಲರೂ ನೆಮ್ಮದಿಯಿಂದಿರಲು ಕಾರಣ ನನ್ನ ಪತಿ ಮತ್ತು ಅವರಂಥ ಸಾವಿರಾರು ಮಂದಿಯ ಬಲಿದಾನವೇ ಕಾರಣವಲ್ಲವೇ” ಎಂದು ಪ್ರಶ್ನಿಸಿದ್ದರು. ಹಾಗೆ ಪ್ರಶ್ನಿಸಿದ ನಂತರ ಅವರು ದುಃಖಿಸುತ್ತ ಅಲ್ಲೇ ಕೆಲವು ಕಾಲ ನಿಂತಿದ್ದರು.

ಅವರ ನೋವಿಗೆ ಸ್ಪಂದಿಸಿದ ವಿದ್ಯಾರ್ಥಿ ಸಮೂಹ ಎದ್ದು ನಿಂತು ಒಂದು ನಿಮಿಷಗಳ ಕಾಲ ಮೌನವಾಗಿ ರೋದಿಸಿತ್ತು. ಈ ಘಟನೆ ನಡೆದು ಹಲವಾರು ತಿಂಗಳುಗಳು ಕಳೆದಿವೆ. ಆದರೆ ಅಂದು ಮೂಡಿದ ಪ್ರಶ್ನೆಗಳಿಗೆ ಮಾತ್ರ ಇಂದಿಗೂ ಉತ್ತರ ಸಿಕ್ಕಿಲ್ಲ.

ನಾವೇಕೆ ದೇಶ ಮತ್ತು ಸಮಾಜಕ್ಕಾಗಿ ಹೋರಾಡಿದವರಿಗೆ ಕನಿಕರ ತೋರಿಸದೆ ಸಿದ್ಧಾಂತಕ್ಕಾಗಿ ಇನ್ನೊಬ್ಬರನ್ನು ಕೊಲ್ಲಲೂ ಹೇಸದ ನಕ್ಸಲೀಯರ ಬಗ್ಗೆ ಕಣ್ಣೀರು ಸುರಿಸುತ್ತೇವೆ? ಬಂದೂಕಿನಿಂದ ಸಮಾಜವನ್ನು ತಿದ್ದುವುದು ಸಾಧ್ಯವಿದ್ದಿದ್ದರೆ ಗಾಂದೀಜಿಯವರ ಅಹಿಂಸಾ ಮಾರ್ಗ ಏಕೆ ಬೇಕಿತ್ತು? ‘ಮೇಲ್ವರ್ಗದವರಿಂದ ದಲಿತರಿಗೆ ಅನ್ಯಾಯವಾಗಿದೆ’ ಅಂತ ಡಾ. ಅಂಬೇಡ್ಕರ್ ದಲಿತರ ಕೈಗೆ ಬಂದೂಕು ಕೊಡಲಿಲ್ಲ. ಬದಲಿಗೆ ಶಿಕ್ಷಣ ನೀಡಿದರು. ಇದು ತತ್ವ, ಸಿದ್ಧಾಂತಗಳ ಅಮಲೇರಿಸಿಕೊಂಡವರಿಗೆ ತಿಳಿದಿಲ್ಲವೇ?

ನಮಗೆ ಸಮಾಜಕ್ಕಿಂತ ತತ್ವ, ಸಿದ್ಧಾಂತಗಳೇ ಮುಖ್ಯವೇ? ತತ್ವ, ಸಿದ್ಧಾಂತಗಳಿಗಿಂತಲೂ ಬದುಕು ಮತ್ತು ನಮ್ಮ ಸುತ್ತಲಿನ ಸಮಾಜವೇ ಮುಖ್ಯ ಅಂತ ಗೊತ್ತಿರುವ (?) ವಿದ್ಯಾವಂತ ಯುವಕ, ಯುವತಿಯರೇ ಏಕೆ ಇಂದು ನಕ್ಸಲ್ ಚಳವಳಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದಾರೆ? ಇವರು ನಕ್ಸಲ್ ಚಳವಳಿಯಲ್ಲಿ ಸೇರಿಕೊಳ್ಳಲು ಪ್ರೇರಣೆ ಯಾರು? ನಕ್ಸಲೀಯರ ಸಿದ್ಧಾಂತಗಳನ್ನು ಪರೋಕ್ಷವಾಗಿ ಬೆಂಬಲಿಸಿ ಪತ್ರಿಕೆಗಳಿಗೆ ಪುಟಗಟ್ಟಲೆ ಲೇಖನ ಬರೆಯುವವರು, ಭಾಷಣ ಮಾಡುವವರು ತಮ್ಮ ಮಕ್ಕಳನ್ನೇಕೆ ನಕ್ಸಲೀಯರನ್ನಾಗಿಸುವುದಿಲ್ಲ? ತಿಳಿದವರು ದಯವಿಟ್ಟು ಉತ್ತರಿಸಿ.

ಕಾಮೆಂಟ್‌ಗಳು

India Mahesh ಹೇಳಿದ್ದಾರೆ…
This is indeed very enlightening and heart reckoning article. I sincerely wish, Vijay, that other people, of your age, will realize this. You have a long way to go, i must say.

U. Mahesh Prabhu
ಅನಾಮಧೇಯಹೇಳಿದ್ದಾರೆ…
'ಇಂದು ವಿವೇಕಾನಂದರ ಭಾಷಣದ ಸಾಲನ್ನು ನಕಲು ಮಾಡಿ ತಮ್ಮ ಭಾಷಣ ಆರಂಭಿಸುವ ಅನೇಕರಿಗೆ ಜಗತ್ತಿನ ಪ್ರತಿಯೊಬ್ಬರನ್ನೂ ತಮ್ಮ ಸಹೋದರ ಅಥವಾ ಸಹೋದರಿಯ ರೂಪದಲ್ಲಿ ನೋಡುವ ಮನಸ್ಸಿಲ್ಲ.'

I too hv felt this many a times...
ಚನ್ನಾಗಿದ್ದು.. ಲಾಸ್ಟ್ ಪ್ಯಾರ ತುಂಬ ಇಷ್ಟ ಆಯ್ತು
ಮಲ್ನಾಡ್ ಹುಡ್ಗಿ
ವಿಜಯ್ ಜೋಶಿ ಹೇಳಿದ್ದಾರೆ…
Thaks to Mahesh sir and malnad hudgi...
ವಿ.ರಾ.ಹೆ. ಹೇಳಿದ್ದಾರೆ…
ನಮಸ್ತೇ ವಿಜಯ್,
ನಿಮ್ಮ ಬ್ಲಾಗನ್ನು ಓದಿದೆ. ಬಹಳ dynamic ಆಗಿವೆ ನಿಮ್ಮ ಬರಹಗಳು. ನಿಮ್ಮ ನೇರ, ದಿಟ್ಟ ದೃಷ್ಟಿ ಬಹಳ ಇಷ್ಟ ಆಯ್ತು. ಎಲ್ಲಾ ಲೇಖನಗಳೂ ಮಾಹಿತಿಪೂರ್ಣ ಹಾಗು thought provoking. Thank you.
ವಿಜಯ್ ಜೋಶಿ ಹೇಳಿದ್ದಾರೆ…
Thanks to VIKAS HEGDE.. Have an eye on my blog always..
Vijay Joshi

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ