ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಭಾಷಣ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

"ಮತಾಂತರ - ಭಯೋತ್ಪಾದನೆ – ಕೋಮುವಾದ"

(ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಡಿಸೆಂಬರ್ ೨೮, ೨೦೦೮ರಂದು ’ಜೈಕನ್ನಡಮ್ಮ’ ವಾರಪತ್ರಿಕೆಯ ದಶಮಾನೋತ್ಸವ ಸಮಾರಂಭ ನಡೆಯಿತು. ಅಂದು ’ಭಯೋತ್ಪಾದನೆ, ಮತಾಂತರ ಮತ್ತು ಕೋಮುವಾದ’ ವಿಷಯದ ಬಗ್ಗೆ ನಾನು ಮಂಡಿಸಿದ ವಿಚಾರಗಳು.) ಸಭಾಧ್ಯಕ್ಷರೆ, ವೇದಿಕೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳೇ ಹಾಗೂ ನೆರೆದಿರುವ ಎಲ್ಲ ಸಹೃದಯರೆ, ಇಂದು ನನಗೆ ಪೂರಕ ಮಾಹಿತಿಗಳನ್ನಾಡಲು ಸೂಚಿಸಿರುವ ವಿಷಯ ಭಯೋತ್ಪಾದನೆ - ಕೋಮುವಾದ - ಮತಾಂತರ. ಬಹುಷಃ ಈ ಮೂರು ವಿಚಾರಗಳು ನಮ್ಮ ದೇಶವನ್ನು ತೀವ್ರವಾಗಿ ಕಾಡುತ್ತಿರುವ ಸಮಸ್ಯೆಗಳು ಅನ್ನುವುದನ್ನು ಎಲ್ಲರೂ - ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ - ಒಪ್ಪುತ್ತಾರೆ ಎಂದು ನಂಬಿದ್ದೇನೆ. ಹಾಗಾಗಿ ಈ ವಿಚಾರಗಳ ಬಗ್ಗೆ ಲಘುವಾಗಿ ಮಾತನಾಡುವುದು ಸಾಧ್ಯವಾಗದು. ಆದರೂ ನನಗೆ ನೀಡಿರುವ ಸಮಯದ ಪರಿಮಿತಿಯಲ್ಲಿ ಈ ವಿಚಾರಗಳ ಬಗ್ಗೆ ನನ್ನ ಅಭಿಪ್ರಾಯವನ್ನು ಮಂಡಿಸುವ ಪ್ರಯತ್ನ ಮಾಡುತ್ತೇನೆ. ಭಯೋತ್ಪಾದನೆ ಎಂಬ ಪದದ ಅರ್ಥ ಮೇಲ್ನೋಟಕ್ಕೆ ಬಹಳ ಸರಳವಾಗಿದೆ. ಭಯದ ಉತ್ಪಾದನೆ, ಯಾರು ಇನ್ನೊಬ್ಬರ ಮನಸ್ಸಿನಲ್ಲಿ ತನ್ನ ಕೃತ್ಯಗಳಿಂದ ಭೀತಿಯನ್ನು ಮೂಡಿಸುತ್ತಾನೋ ಅವನನ್ನು ಭಯೋತ್ಪಾದಕ ಅನ್ನಬಹುದು ಹಾಗೂ ಆ ಪ್ರಕ್ರಿಯೆಯನ್ನು ಭಯೋತ್ಪಾದನೆ ಎಂದು ಕರೆಯಬಹುದು. ಇದರರ್ಥ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಭಾರತೀಯರ ಪಾಲಿಗೆ ಭಯೋತ್ಪಾದಕನಾದರೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಪಾಲಿಗೆ ಭಯೋತ್ಪಾದಕರಾಗಿ ಕಾಣಬಹುದು! ...