ವಿಷಯಕ್ಕೆ ಹೋಗಿ

ಮೂರನೆಯ ಇರುವಿಕೆಯ ಹುಡುಕಾಟ...

ವಿದ್ಯಾಧರ ಎಸ್. ನೈಪಾಲ್ ಅವರ ಬಗ್ಗೆ ಇತ್ತೀಚೆಗೆ ಗಿರೀಶ ಕಾರ್ನಾಡರು ಒಂದು ಹೇಳಿಕೆ ನೀಡಿದ್ದರು. ಅದು ವಿವಾದಕ್ಕೂ ಕಾರಣವಾಗಿತ್ತು. (ಅಂದಹಾಗೆ ನಮ್ಮಲ್ಲಿ ಎಲ್ಲವೂ ವಿವಾದಕ್ಕೆ ಹೇತುವಾಗುತ್ತಿದೆಯಲ್ಲ?!) ಈ ಸಂದರ್ಭದಲ್ಲಿ ನೈಪಾಲರನ್ನು ನಿಮ್ಮ ಅಭಿಪ್ರಾಯದಲ್ಲಿ ಸೆಕ್ಯುಲರಿಸಂ ಅಂದರೆ ಏನು ಎಂದು ಒಬ್ಬರು ಪ್ರಶ್ನಿಸಿದ್ದರು. “ಭಾರತದ ಮಟ್ಟಿಗೆ ಸೆಕ್ಯುಲರಿಸಂ ಅಂದರೆ ಯಾವುದೋ ಒಂದು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳುವುದು ಅಥವಾ ಗುರುತಿಸಿಕೊಳ್ಳದೇ ಇರುವುದು. ಅದಕ್ಕಿಂತ ಹೆಚ್ಚಿನ ಯಾವುದೇ ಅರ್ಥ ಇಲ್ಲ” ಎಂದು ನೈಪಾಲರು ಉತ್ತರಿಸಿದ್ದರು.

ಹೌದು ನಮ್ಮಲ್ಲಿ ಸೆಕ್ಯುಲರಿಸಂ ಅಂದರೆ ಏನರ್ಥ? ಈ ಬಗ್ಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಮೂರು ಪುಟ್ಟ ಪುಟ್ಟ ಬರಹಗಳು ಇಲ್ಲಿವೆ. ನೋಡಿ. ಓದಿದ ನಂತರ ನಿಮಗೆ ಏನನ್ನಿಸಿತು ಎಂಬುದನ್ನು ಬರೆಯಿರಿ.
***
ನಾನು ಭಾರತೀಯ. ನಾನು ಯಾವುದೇ ಮತದ ಅನುಯಾಯಿ ಅಲ್ಲ. ಅಂದರೆ ಯಾವುದೇ ಒಂದು ನಿರ್ದಿಷ್ಟ ಗ್ರಂಥ ಹಾಗೂ ನಿರ್ದಿಷ್ಟ ಮತಸ್ಥಾಪಕನ ಅನುಯಾಯಿ ನಾನಲ್ಲ. ಭಾರತದಲ್ಲಿರುವ ಬಹುಪಾಲು ಮಂದಿ ನನ್ನಂಥವರೇ. ಅವರಿಗೆ ಒಂದೇ ದೇವರು, ಒಂದೇ ಗ್ರಂಥ, ಒಬ್ಬನೇ ಗುರು ಇಲ್ಲ. ಹಿಂದೂ ಎಂಬ ರಿಲಿಜನ್ನನಗೆ ಇನ್ನೂ ಅರ್ಥವಾಗುತ್ತಿಲ್ಲ.

ನಾನು ಯಾವುದೇ ರಿಲಿಜನ್ ಅನುಯಾಯಿ ಅಲ್ಲದ ಕಾರಣ, ರಿಲಿಜನ್ಇರುವ ದೇಶಗಳಿಗೆ ಬೇಕಾದ ಸೆಕ್ಯುಲರಿಸಂ ನನಗೆ ಅನ್ವಯ ಆಗದು! ಸೆಕ್ಯುಲರಿಸಂ ನನಗೆ ಅನ್ವಯ ಆಗದು ಎಂದಾಕ್ಷಣ ನಾನು ಕೋಮುವಾದಿ ಆಗುವುದಿಲ್ಲ!! ಸೆಕ್ಯುಲರ್ಅಲ್ಲದ, ಕೋಮುವಾದಿ ಕೂಡ ಅಲ್ಲದ ಮೂರನೆಯ ಒಂದು ಐಡೆಂಟಿಟಿ ನನಗಿದೆ. ಅದು ಯಾವುದು ಎಂದು ಹೇಳಿ. ನೀನು ಸೆಕ್ಯುಲರ್‍, ಅದಲ್ಲದಿದ್ದರೆ ನೀನು ಕೋಮುವಾದಿ. ಇವೆರಡರಲ್ಲಿ ಯಾವುದೋ ಒಂದು, ಅಷ್ಟೇ ಎಂದು ಹೇಳಬೇಡಿ!
***
ಭಾರತದ ರಾಜಕೀಯ ಸಂದರ್ಭದಲ್ಲಿ ಸೆಕ್ಯುಲರ್ಆಗಿರುವುದು ಅಂದರೇನು? ಇಲ್ಲಿ ಸೆಕ್ಯುಲರ್ಆಗಿರುವುದು ಎಂದರೆ ಕೋಮುವಾದಿ ಆಗಿರದೇ ಇರುವುದು ಮಾತ್ರವೇ? ಕೋಮುವಾದಿ ಆಗಿರುವುದು ಎಂದರೆ ಸೆಕ್ಯುಲರ್ಆಗಿರದೇ ಇರುವುದೇ?

ಭಾರತದ ಬಹುಪಾಲು ಮಂದಿ ಯಾವುದೇ ರಿಲಿಜನ್ ಅನುಯಾಯಿಗಳಲ್ಲ. ರಿಲಿಜನ್ಇರುವ ದೇಶಗಳಿಗೆ ಬೇಕಿರುವ ಸೆಕ್ಯುಲರಿಸಮ್ಮಿಗೆ ಹೊರತಾದ ಒಂದು ಮೌಲ್ಯ ನಾಡಿನಲ್ಲಿ ಈಗಾಗಲೇ ಇದೆ ಅಲ್ಲವೇ? ಅದೇ ನಮ್ಮ ದೇಶವನ್ನು, ಇಲ್ಲಿನ ಸಾಮಾಜಿಕ ಸಾಮರಸ್ಯ ಕಾಪಾಡಿಕೊಂಡು ಬಂದಿದೆ ಅಲ್ಲವೇ? ಹಾಗಾದರೆ ಮೌಲ್ಯವನ್ನು ಯಾವ ಹೆಸರಿನಿಂದ ಕರೆಯೋಣ?
***
ನಾಡಿನ ಕೋಟ್ಯಂತರ ಆಸ್ತಿಕರ ಪಾಲಿಗೆ ಧರ್ಮಸ್ಥಳ ಶ್ರದ್ಧಾಕೇಂದ್ರ. ಅಲ್ಲಿನ ದೇವರು ಮಂಜುನಾಥಸ್ವಾಮಿ. ಅಂದರೆ ಶಿವ. ಶೈವ ಪಂಥದ ಆಸ್ತಿಕರು ಆರಾಧಿಸುವುದು ಇವನನ್ನೇ. ಧರ್ಮಸ್ಥಳದ ಅರ್ಚಕರು ವೈಷ್ಣವ ಪಂಥದವರು. ಅಲ್ಲಿನ ಧರ್ಮಾಧಿಕಾರಿಗಳು ಜೈನರು. ಅಲ್ಲಿಗೆ ಬರುವ ಆಸ್ತಿಕರು ಸರ್ವಪಂಥಗಳಿಗೆ ಸೇರಿದವರು!

ಸೆಕ್ಯುಲರ್ ಎಂಬ ಪರಿಕಲ್ಪನೆಯು ಮೊದಲು ಬಳಕೆಗೆ ಬಂದಿದ್ದು ಇಂಗ್ಲೆಂಡಿನಲ್ಲಿ, 1851ರಲ್ಲಿ. ಇಲ್ಲಿ ಧರ್ಮಸ್ಥಳದಲ್ಲಿ ಅದಕ್ಕಿಂತಲೂ ಹಿಂದಿನಿಂದಲೇ ಶೈವ, ವೈಷ್ಣವ ಮತ್ತು ಜೈನ ಸಂಪ್ರದಾಯಗಳ ತ್ರಿವೇಣಿ ಸಂಗಮ ಅಸ್ತಿತ್ವದಲ್ಲಿ ಇದೆ. ಪರಸ್ಪರ ವಿಭಿನ್ನ ಚಿಂತನೆಗಳನ್ನು ಹೊಂದಿರುವ ಮೂರು ಪಂಥದವರು ಅಪೂರ್ವ ಸಾಮರಸ್ಯ ದಿಂದ ಕ್ಷೇತ್ರದಲ್ಲಿ ಭಕ್ತಿಭಾವದಿಂದ ನಡೆದುಕೊಳ್ಳುತ್ತಿರುವುದು ಸೆಕ್ಯುಲರ್ ವಾದದಿಂದಲಾ?

ನನ್ನಜ್ಜ ಧರ್ಮಸ್ಥಳದ ಭಕ್ತ. ಆತ ಒಂದರ್ಥದಲ್ಲಿ ಶೈವ. ಏಕೆಂದರೆ ಆತನ ಕುಲದೈವ ಶಿವ. ಶ್ರದ್ಧಾವಂತ ಸಂಪ್ರದಾಯಸ್ಥ ಆತ. 'ವಿಭಿನ್ನ ಸಂಪ್ರದಾಯಗಳನ್ನು ಪಾಲಿಸುವವರು ಅಲ್ಲಿನ ಅರ್ಚಕರು. ಆದರೂ ನೀನು ಅಲ್ಲಿಗೆ ಹೋಗುತ್ತೀಯಾ. ನೀನು ಸೆಕ್ಯುಲರ್ ವಾದಿಯಾ?' ಎಂದು ಒಮ್ಮೆ ಕೇಳಿದ್ದೆ. ಸೆಕ್ಯುಲರ್ಅಂದರೆ ಏನು ಎಂಬುದು ಗೊತ್ತಾಗದರೆ ಅಜ್ಜ ಕಣ್ಣು ಪಿಳಿಪಿಳಿ ಬಿಟ್ಟಿದ್ದ. ಸೆಕ್ಯುಲರ್ ಅಲ್ಲದಿದ್ದರೆ ನೀನು ಕೋಮುವಾದಿ ಆಗಿದ್ದೀಯಾ ಎಂದು ಕೇಳಿದ್ದೆ. ಅದೂ ಅಜ್ಜನಿಗೆ ಗೊತ್ತಾಗಲಿಲ್ಲ. ಊಹೊಂ ಗೊತ್ತಾಗುತ್ತಿಲ್ಲ ನನಗೆ ಇದೆಲ್ಲ ಎಂದಿದ್ದ.


ನಾವು ರಾಜಕೀಯ ಮತ್ತು ಸಂಸ್ಕೃತಿಯ ಕುರಿತು ಚರ್ಚೆ ನಡೆಸುವಾಗಲೆಲ್ಲ, ಒಬ್ಬ ಸೆಕ್ಯುಲರ್‍ ಅದಲ್ಲದಿದ್ದರೆ ಆತ ಕೋಮುವಾದಿ ಎಂಬ ಪೂರ್ವ ನಿರ್ಧಾರಿತ ನೆಲೆಯಲ್ಲೇ ಮಾತನಾಡುತ್ತಿದ್ದೇವೆ. ಇದೇ ರೀತಿ ಮುಂದುವರಿದರೆ ನಮ್ಮ ಯಾವ ಚರ್ಚೆಗಳೂ, ಮಂಥನಗಳೂ ಅಮೃತವನ್ನು ನೀಡಲಾರವು. ಅವು ಹಾಲಾಹಲವನ್ನು ಮಾತ್ರ ನೀಡಬಲ್ಲವು. ಯಾವುದೇ ರಿಲಿಜನ್ಅನುಯಾಯಿ ಅಲ್ಲದ ನಮಗೆ (ಅಥವಾ ನಮ್ಮಲ್ಲಿನ ಬಹುಸಂಖ್ಯಾತರಿಗೆ) ಸೆಕ್ಯುಲರ್ಅಲ್ಲದ, ಕೋಮುವಾದಿಯೂ ಅಲ್ಲದ ಮೂರನೆಯ ಇರುವು ಇದೆಯಲ್ಲವೇಬನ್ನಿ ಅದನ್ನು ಹುಡುಕೋಣ...!!!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ