ವಿಷಯಕ್ಕೆ ಹೋಗಿ

ಆ ಪ್ರಶ್ನೆಗೆ ಮಹಾತ್ಮ ಗಾಂಧೀಜಿಯೂ ಉತ್ತರ ನೀಡಲಾರರು...


ನೀವು ಭೇಟಿ ಮಾಡುವ ಪುಟಾಣಿಗಳನ್ನೆಲ್ಲಾ ವಿಜ್ಞಾನಿ, ಎಂಜಿನಿಯರ್, ಡಾಕ್ಟರ್ ಆಗುಎಂದು ಹುರಿದುಂಬಿಸುತ್ತೀರಿ. ಆದರೆ ನೀವು ಯಾರನ್ನೂ ರೈತನಾಗು ಎಂದುಪ್ರೋತ್ಸಾಹಿಸುವುದಿಲ್ಲ. ಯಾಕೆ ಕಲಾಂ?’

ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಭಾರತರತ್ನ ಅಬ್ದುಲ್ ಕಲಾಂಗೆ ಶಾಲಾವಿದ್ಯಾರ್ಥಿಯೊಬ್ಬ ಪ್ರಶ್ನೆ ಕೇಳಿದಾಗ ಒಮ್ಮೆ ಅವರ ಬಾಯಿ ತಡವರಿಸಿರಬಹುದು. ಆದರೆಅವರಿಗೆ ಪ್ರಶ್ನೆಗೆ ಉತ್ತರ ಥಟ್ಟನೆ ಹೊಳೆದಿರಲಿಕ್ಕಿಲ್ಲ.

ಕಾಲಚಕ್ರದ ಮೇಲೆ ಕುಳಿತು ಒಮ್ಮೆ ಹಿಮ್ಮುಖವಾಗಿ ಚಲಿಸೋಣ. ‘ಅಂವ ತನ್ನ ತೋಟವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವಂತೆ. ಅವನ ಅಪ್ಪ ಅದೆಷ್ಟು ಕಷ್ಟಪಟ್ಟು ತೋಟವನ್ನು ಬೆಳೆಸಿದರು. ಅವನಿಗಾಗಿ ಬಿಟ್ಟುಹೋದರು. ಸೋಂಬೇರಿ ಪಿತ್ರಾರ್ಜಿತತೋಟವನ್ನು ಹಾಳುಮಾಡಿಕೊಳ್ಳುತ್ತಿದ್ದಾನೆ.’

ನಾವಿನ್ನೂ ಚಿಕ್ಕವರಾಗಿದ್ದಾಗ ನಮ್ಮ ಊರಿನಲ್ಲಿ ರೀತಿಯ ಮಾತುಗಳು ಊರಿನ ಹಿರಿಯರ ಬಾಯಲ್ಲಿ ಆಗಾಗ ಕೇಳಿಬರುತ್ತಲೇಇದ್ದವು. ‘ಬೇಜವಾಬ್ದಾರಿವ್ಯಕ್ತಿ ತನ್ನ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳದಿದ್ದರೂ ಆದೀತು, ಆದರೆ ಆತ ತನ್ನ ತೋಟವನ್ನೋಅಥವಾ ಹೊಲವನ್ನೋ ಚೆನ್ನಾಗಿ ನೋಡಿಕೊಂಡಿರದಿದ್ದರೆ ಊರವರ ಬಾಯಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದ. ಕೃಷಿ ಮತ್ತುರೈತಾಪಿಯ ಬಗ್ಗೆ ವ್ಯಕ್ತಿಯೊಬ್ಬ ತೋರಿಸುತ್ತಿದ್ದ ಶ್ರದ್ಧೆಯ ಆಧಾರದ ಮೇಲೆ ಆತನ ವ್ಯಕ್ತಿತ್ವವನ್ನು ಅಳೆಯುತ್ತಿದ್ದರು ನಮ್ಮ ಹಿರಿಯರು.

ಇವತ್ತಿನ ಸಂದರ್ಭ ಬೇರೆಯೇ ಆಗಿದೆ. ‘ಅಂವ ತನ್ನ ತೋಟ ಮಾರಿದ. ಬೆಂಗಳೂರಿನಲ್ಲಿ ಫ್ಲಾಟ್ ಕೊಂಡಿದ್ದಾನಂತೆ. ಇನ್ನು ಅಂವಅಲ್ಲೇ ಇರ್ತಾನಂತೆಇಂಥ ಮಾತುಗಳು ಇವತ್ತು ನಮ್ಮ ಹಳ್ಳಿಗರ ಬಾಯಲ್ಲಿ ಬಹಳ ಹೆಮ್ಮೆಯಿಂದ ಬರುತ್ತಿವೆ. ಜೊತೆಗೇಮುಂದೊಂದು ದಿನ ತಮ್ಮ ಮಕ್ಕಳೂ ಬೆಂಗಳೂರಿನಲ್ಲೊಂದು ಚೆಂದದ ಮನೆ ಕಟ್ಟಿಸಬಹುದು, ನಾವೂ ಅಲ್ಲಿಗೇ ವಲಸೆಹೋಗಬಹುದೆಂಬ ಸಣ್ಣ ಆಶಾಭಾವವೂ ಅವರ ಮಾತುಗಳಲ್ಲಿ ಇರಬಹುದು. ರೈತಾಪಿಯಲ್ಲಿನ ಯಶಸ್ಸನ್ನು ಜೀವನದ ಯಶಸ್ಸುಎಂದು ಅರ್ಥೈಸುತ್ತಿದ್ದ ಕಾಲದಿಂದ ರೈತಾಪಿಯನ್ನು ಬಿಟ್ಟರೇ ಜೀವನದಲ್ಲಿ ಯಶಸ್ಸು ಎಂದು ಅರ್ಥೈಸುವವರೆಗೆ ಕಾಲ ಮುಂದೆಸಾಗಿದೆ - ಅಥವಾ ಹಿಂದೆ ನಡೆದಿದೆ.

೧೯೯೦ರ ನಂತರ ಭಾರತ ಕಂಡ ಆರ್ಥಿಕ ಸಮೃದ್ಧತೆ ನಮ್ಮಲ್ಲಿನ ಅನೇಕ ಸಾಮಾಜಿಕ ಚಳವಳಿಗಳನ್ನು ಕೊಂದುಹಾಕಿತು. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ಖಾಸಗಿ ವಲಯದಲ್ಲಿ ಅಸಂಖ್ಯ ಹೊಸ ಉದ್ಯೋಗಗಳುಸೃಷ್ಟಿಯಾದವು. ಭಾರತೀಯ ಸಮಾಜದ ಒಂದು ವರ್ಗ ಹೊಸ ಅವಕಾಶಗಳನ್ನು ಸಮರ್ಥವಾಗಿ ಬಾಚಿಕೊಂಡಿತು; ಮೂಲಕಆರ್ಥಿಕವಾಗಿ ಸಾಕಷ್ಟು ಬಲವಾಯಿತು. ಒಟ್ಟಾರೆಯಾಗಿ ನಮ್ಮ ಸಮಾಜದ ಒಂದು ದೊಡ್ಡ ವರ್ಗಹಣಮಾಡುವ ಚಳವಳಿ ಹಿಂದೆಸಾಗಿತು. ಆರ್ಥಿಕ ಸಮೃದ್ಧಿಯ ಫಲವಾದ ಮೇಲ್ಮಧ್ಯಮ ಮಟ್ಟದ ಬದುಕನ್ನು ಅನುಭವಿಸತೊಡಗಿತು.

ಹಣ ಮಾಡುವ ಚಳವಳಿ ಹಿಂದೆ ಸಮಾಜದ ಬಹುದೊಡ್ಡ ವರ್ಗವೊಂದು ಸಾಗಿದ್ದು ತಪ್ಪಲ್ಲ. ಆದರೆ ಅಂಥದ್ದೊಂದು ಮಹತ್ವದಕಾಲಘಟ್ಟವನ್ನು ಹಾದು ಬಂದು ಎರಡು ದಶಕದ ನಂತರ ತಿರುಗಿ ನೋಡಿದರೆ, ಸಮಾಜದಲ್ಲಾದ ಅನೇಕ ಉತ್ಪಾತಗಳಿಗೆಹಣವೇಮೂಲ ಕಾರಣ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರೆ ಐದಂಕಿ ಸಂಬಳ ಖಚಿತ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಸಾಹಿತ್ಯ, ಸಂಸ್ಕೃತಿ ಮತ್ತಿತರ ಮಾನವಿಕ ವಿಷಯಗಳ ಬಗ್ಗೆ ತೀವ್ರ ಕುತೂಹಲ ತೋರುತ್ತಿದ್ದ ವಿದ್ಯಾರ್ಥಿಗಳಿಗೆ ಇದಕ್ಕಿದ್ದಂತೆ ಕಂಪ್ಯೂಟರ್ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿದ್ದನ್ನು ನಮ್ಮ ಓರಗೆಯ ಅನೇಕರು ಖುದ್ದಾಗಿ ಗಮನಿಸಿರುತ್ತಾರೆ.

ಹಾಗಂತ ಅಲ್ಲಿಯವರೆಗೆ ಯಾರೂ ಸಾಫ್ಟ್ವೇರ್ ಎಂಜಿನಿಯರಿಂಗ್ ಓದಿರಲಿಲ್ಲ ಎಂಬ ವಾದ ಇಲಿಲ್ಲ. ಅಲ್ಲಿಯವರೆಗೂ ಆಸಕ್ತಿಯಿಂದಓದುತ್ತಿದ್ದರು, ಆದರೆ ನಂತರದ ದಿನಗಳಲ್ಲಿ ಪಾಲಕರ ಒತ್ತಡದ ಕಾರಣ ಕೋರ್ಸ್ ಓದುವವರ ಸಂಖ್ಯೆ ಹೆಚ್ಚಾಯಿತು, ಹಾಗೆಯೇಹಣದ ಒತ್ತಡದಿಂದಲೂ ಸಹ.

ಎಂಜಿನಿಯರಿಂಗ್ ಓದುವುದು, ಹಣ ಮಾಡುವುದು, ವಿದೇಶಕ್ಕೆ ಹಾರುವುದು... ಇವೆಲ್ಲದಕ್ಕೂ ಮಿಗಿಲಾದ ಬದುಕು ಇದೆ ಎಂದು ಗಟ್ಟಿಸ್ವರದಲ್ಲಿ ಹೇಳುತ್ತಿದ್ದ ವಿದ್ಯಾರ್ಥಿ ಚಳವಳಿಗಳು, ರೈತ ಚಳವಳಿಗಳುಹಣ ಮಾಡುವ ಚಳವಳಿಯನ್ನು ಎದುರಿಸಲಾಗದೆಬಡವಾದವು. ಅನಿಶ್ಚಿತ ಹವಾಮಾನ, ಬೆಳೆ ಮತ್ತು ಮಾರುಕಟ್ಟೆಯ ಉರುಳು ಯಾವತ್ತಿನಂತೆ ರೈತನ ಕೊರಳ ಸುತ್ತ ಸುತ್ತಿಕೊಂಡೇಇತ್ತು. ೯೦ರ ದಶಕದ ಆರಂಭದಿಂದ ದೇಶದೊಳಕ್ಕೆ ಹರಿದು ಬಂದು ವಿದೇಶಿ ಹಣ ಹೇಗೋ ರೈತನ ಜೇಬು ತುಂಬಲಿಲ್ಲ. ಹಣಕೃಷಿಯೇತರ ಕಾಯಕದಲ್ಲಿ ತೊಡಗಿಸಿಕೊಂಡವರಲ್ಲೇ ಉಳಿದುಬಿಟ್ಟಿತು.

ಸೆನ್ಸೆಕ್ಸ್ನಲ್ಲಿ ಒಂದಂಶ ಕುಸಿತ ಕಂಡರೂ ದೇಶದ ಹಣಕಾಸು ಸಚಿವರು ಶೇರು ದಲ್ಲಾಳಿಗಳ ಯೋಗಕ್ಷೇಮ ವಿಚಾರಿಸಲು ಓಡೋಡಿಬರುತ್ತಾರೆ. ಆದರೆ ನೂರಾರು ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಂಡರೂ ದೇಶದ ಪ್ರಧಾನಿ ರೈತರತ್ತ ಮುಖಮಾಡಲಾರಎಂಬ ದಾರುಣ ಸತ್ಯ ಕೂಡ ರೈತನಿಗೆ ಅರ್ಥವಾಯಿತು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲೇ ನಮ್ಮ ದೇಶದ ರೈತ ತನ್ನಜೀವದ ಕಸುಬನ್ನು ಬಿಟ್ಟು ತಿಂಗಳ ಸಂಬಳ ಬರುವ ಕೆಲಸಗಳತ್ತ ಮುಖ ಮಾಡಿದ್ದು.

ಓದಿನಲ್ಲಿ ಬುದ್ಧಿವಂತನಾಗಿರುವವ ರೈತನಾಗಿ ಜೀವನ ನಡೆಸುವುದು ಅಪರಾಧ ಎಂಬ ಭಾವನೆಯನ್ನು ಎಳೆಯ ಮಕ್ಕಳ ಮನಸ್ಸಿನಲ್ಲಿವ್ಯವಸ್ಥಿತವಾಗಿ ಬಿತ್ತುವ ಇಂದಿನ ಶಿಕ್ಷಣ ಪದ್ಧತಿಯೂ ರೈತಾಪಿಯಿಂದ ಇತರೆ ವೃತ್ತಿಗಳೆಡೆ ಜನ ಆಕರ್ಷಿತರಾಗುವಂತೆ ಮಾಡಿದೆಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ, ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆ ಇಲ್ಲ... ಮುಂತಾದ ಅನೇಕಇಲ್ಲಗಳಿಗಿಂತ ಹೆಚ್ಚಾಗಿ ರೈತರಿಗೆ ನಮ್ಮ ಸಮಾಜ ನಿರಾಕರಿಸುತ್ತಿರುವ ಆತ್ಮಗೌರವ ಕೂಡ ವೃತ್ತಿಯಿಂದ ಅಸಂಖ್ಯ ಮಂದಿವಿಮುಖರಾಗುವಂತೆ ಮಾಡಿದೆ. ಸಾಫ್ಟ್ವೇರ್, ಹಾರ್ಡ್ವೇರ್...ಉದ್ಯೋಗಿಗಳಿಗೆ ನಾವು ತೋರಿಸುತ್ತಿರುವ ಗೌರವದಅರ್ಧದಷ್ಟನ್ನಾದರೂ ರೈತನಿಗೆ ನೀಡಿದ್ದರೆ ಇವತ್ತಿಗೂ ಒಂದಿಷ್ಟು ಮಂದಿ ಯುವಕರು ಹೆಮ್ಮೆಯಿಂದ ನೊಗ ಹೊರುತ್ತಿದ್ದರು. ತಮ್ಮತೋಟ-ಹೊಲಗಳ ಮಣ್ಣು ಮುಟ್ಟಿ ಖುಷಿ ಅನುಭವಿಸುತ್ತಿದ್ದರು.

ಬ್ರೆಜಿಲ್ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕೃಷಿಯ ಕುರಿತು ಪ್ರಾಯೋಗಿಕ ತರಗತಿಗಳಿರುತ್ತವೆ. ತರಗತಿಗಳು ಅಂದರೆ ನಮ್ಮ ದೇಶದಲ್ಲಿ ಆಗುವಂತೆ ಕರಿ ಹಲಗೆಯ ಮೇಲೆ ನೇಗಿಲ ಚಿತ್ರ ಬರೆದುಇದು ರೈತನ ಸಾಧನಎಂದುಗಿಳಿಪಾಠ ಹೇಳಿಕೊಡುವಂತಹ ಕ್ರಮ ಅಲ್ಲ ಅದು. ಅಲ್ಲಿ ಪ್ರತಿ ಮಗುವನ್ನೂ ಹೊಲಕ್ಕೆ ಕರೆದೊಯ್ದು, ಮಗು ಮಣ್ಣನಲ್ಲಿ ಕೆಲಸಮಾಡುವಂತೆ ಮಾಡಿ, ಮಗುವಿಗೆ ಮಣ್ಣಿನ ಜೊತೆ ಅವಿನಾಭಾವ ಸಂಬಂಧ ಬೆಳೆಯುವಂತೆ ಮಾಡಲಾಗುತ್ತದೆ.

ಪ್ರಾಥಮಿಕ ಹಂತದಿಂದ ಆರಂಭವಾಗುವ ಕ್ರಮ ಪ್ರೌಢ ಶಿಕ್ಷಣದ ವರೆಗೂ ಮುಂದುವರೆಯುತ್ತದೆ. ಮುಂದೆ ಮಗು ಯಾವುದೇಜ್ಞಾನ ಶಾಖೆಯನ್ನು ಅಧ್ಯಯನ ಮಾಡುವ ಆಸಕ್ತಿ ಬೆಳೆಸಿಕೊಂಡರೂ ಮಣ್ಣು ಮತ್ತು ಕೃಷಿಯ ಬಗ್ಗೆ ತಾತ್ಸಾರ ಅಥವಾತಿರಸ್ಕಾರವನ್ನಂತೂ ಬೆಳೆಸಿಕೊಳ್ಳುವುದಿಲ್ಲ. ‘ನಾನು ಎಂಜಿನಿಯರ್, ನಾನ್ಯಾಕೆ ಬಂದು ಹೊಲದಲ್ಲಿ ಕೆಲಸ ಮಾಡಲಿ?’ ಎಂಬಂಥಅಹಂಕಾರದ ಮಾತನ್ನೂ ಖಂಡಿತ ಆಡುವುದಿಲ್ಲ. ಭಾರತದ ಮಟ್ಟಿಗೆ ಶ್ರಮ ಸಂಸ್ಕೃತಿ ಬೇರೆ ಅಲ ಕೃಷಿ ಬದುಕು ಬೇರೆ ಅಲ. ಅಂಥಬದುಕಿಗೆ ಹೆಮ್ಮೆಯಿಂದ ಮರಳಲು ಬ್ರೆಜಿಲ್ ನಮಗೆ ಅತ್ಯುತ್ತ ಮಾದರಿಯಾಗಬಲ್ಲದು.

ಎಳೆ ವಯಸ್ಸಿನಿಂದಲೇ ಮಕ್ಕಳಲ್ಲಿ ಕೃಷಿಯ ಬಗ್ಗೆ ಕಿಂಚಿತ್ ಅಭಿಮಾನವನ್ನೂ ಮೂಡಿಸದೆ ಯುವಕರು ಕೃಷಿಯೆಡೆಗೆಆಕರ್ಷಿತರಾಗುತ್ತಾರೆ ಎಂದು ನಿರೀಕ್ಷಿಸುವುದೇ ಮೂರ್ಖತನವಾಗುತ್ತದೆ. ಅಂಥದ್ದೊಂದು ಶಿಕ್ಷಣ ಕ್ರಮ ನಮ್ಮಲ್ಲಿ ಜಾರಿಗೆಬರುವವರೆಗೆ ಪುಟಾಣಿ ಕೇಳಿದ ಪ್ರಶ್ನೆಗೆ ಭಾರತರತ್ನ ಅಬ್ದುಲ್ ಕಲಾಂ ಮಾತ್ರವಲ್ಲ ಭಾರತರತ್ನಕ್ಕಿಂತ ಮಿಗಿಲಾದ ಮಹಾತ್ಮಗಾಂಧಿ ಕೂಡ ಉತ್ತರ ನೀಡಲು ಸಾಧ್ಯವಿಲ್ಲ.

‌‌ ‌ ‌‌ ‌ - ವಿಜಯ್ ಜೋಷಿ.

ಕಾಮೆಂಟ್‌ಗಳು

ವಿ.ರಾ.ಹೆ. ಹೇಳಿದ್ದಾರೆ…
ಹೌದು, ಸರಿಯಾದ ವಿಚಾರ. ಚೆನ್ನಾಗಿ ಬರೆದಿದ್ದೀರಿ.

ನಮ್ಮ ಶಿಕ್ಷಣ ವ್ಯವಸ್ತೆ ಮಕ್ಕಳನ್ನು ಮಣ್ಣಿನಿಂದ ದೂರ ಮಾಡುತ್ತಲಿದೆ. ಅದರಲ್ಲಿ ವ್ಯವಸಾಯದ ಬಗ್ಗೆ ಇನ್ನೂ ಹೆಚ್ಚಿನ ಅಳವಡಿಕೆ ಬೇಕಾಗಿದೆ. ಅದರ ಬಗ್ಗೆ ಆಸಕ್ತಿ ಹುಟ್ಟಿಸುವ ಕೆಲಸವೂ ಆಗಬೇಕಾಗಿದೆ. ಓದಿದವರು ಎಂದರೆ ಕೃಷಿ ಮಾಡುವುದು ಅವಮಾನ ಎನ್ನುವ ಮನೋಸ್ಥಿತಿ ಮೊದಲು ಹೋಗಬೇಕು.
Concerned For Working Children ಹೇಳಿದ್ದಾರೆ…
ತುಂಬಾ ದಿನದ ನಂತರ ನಿನ್ನ ಲೇಖನ ಓದಿದೆ ಚೆನ್ನಾಗಿದೆ.ಎಲ್ಲಾ ಕೆಲಸವೂ ಒಂದಿಲ್ಲ ಒಂದು ರೀತಿ ಅವಮಾನವೇ ಈಗ ರಾಜಕಾರಣಿಗಳು ಮಾಡುವ ಕೆಲಸವೂ ಅವಮಾನವೇ ಆಗಿದೆ
sudeesh ಹೇಳಿದ್ದಾರೆ…
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
sudeesh ಹೇಳಿದ್ದಾರೆ…
ಬ್ರಿಟಿಶರು ಮೆಕಲೆ ಶಿಕ್ಷಣ ಪದ್ದತಿಯನ್ನು ತನ್ದರು ನಮ್ಮ ದೆಶದ ಬುದ್ದುಜಿವಿಗಳು ಅದನ್ನು ಪ್ರಶoಮ್ ಶಿಸಿದರು ಜಾಗತಿಕರಣ ಬನ್ದಗಲು ರoಗೋಲಿ ಇಟ್ಟು ಬರಮಡಿಕೊನ್ದರು ಜಾಗತಿಕರಣವನ್ನು ಟಿಕಿಸುವವರನ್ನು ಈ ಬುದ್ದುಜಿವಿಗಳು
ಜಾಗತಿಕರಣಬಾರದಿದ್ದರೆ ನಮ್ಮ ದೆಶದ ಯುವಕರು ಇನ್ನು ಸಗಣಿ ಬಾಚಬೆಕಗುತ್ತದೆ ಎoದು ನಮ್ಮ ರಾಜ್ಯದ ಮಹಾ ಕವಿಗಳೊಬ್ಬರು ಹಳೀಕೊoಡಿದ್ದರು ಅದರೆ ಈ ತರಹ ಹೆಳೀದವರ್ಯರು ಇಗ ಬದುಕುಳಿದಿಲ್ಲ ಇಗ ಜಾಗತಿಕರಣದಿನ್ದಗಿರುವ ದುಶ್ಪರಿಣಮ ದಡ್ಡಾದಗಿದೆ.ಮುನ್ದೆ ದೆಶದ ಯುವಕರು ಸಗಣಿ ಬಾಚುವುದರಿನ್ದಾ ಪರಿಸರಕ್ಕೆ ಹಾನಿಇಲ್ಲವೆoದು ವ್ಯವಸಾಯಾ ಮಡಲು ಮುoದೆ ಬರುತಾರೆ.ದನ ಲಕ್ಷ್ಮೀ ಇಗ ಪ್ರಪoಚದಲ್ಲಿ ಚನ್ನಗಿ ಇದ್ದಾಳೆ,ಮುನ್ದೊoನ್ದು ದಿನ ದನ ಲಕ್ಷ್ಮೀ ಇದ್ದರು ದಾನ್ಯ ಲಕ್ಷ್ಮೀ ಕಟಾಕ್ಶ ಇರುವುದಿಲ್ಲ ಹಾಗಾಗಿ ವ್ಯಯಸಯ ಪ್ರೋತ್ಸಾಹಿಸಿ ದಾನ್ಯ ಲಕ್ಷ್ಮೀ ಕೃಪೆಗೆ ಪಾತ್ರರಗಿ.
ತಾಳೆಗರಿ ಹೇಳಿದ್ದಾರೆ…
ನಿಮ್ಮ ವಿಚಾರ ಒಪ್ಪುವಂಥದ್ದು. ನಮ್ಮ ವಿದ್ಯಾಭ್ಯಾಸ ಮತ್ತು ಸಂಸ್ಕೃತಿ ಕೃಷಿ ಮತ್ತು sustainable ವಿಷಯಗಳ ಬುನಾದಿಯ ಮೇಲೆ ಇರಬೇಕು.

ಗಾಂಧಿಯವರ ಆಭಿವೃಧ್ಧಿಯ ಕಲ್ಪನೆ ಈಗಿನ materialistic ಅಭಿವೃದ್ಧಿಯೆಡೆಯಾಗಿರಲಿಲ್ಲ. ಅವರ ಗ್ರಾಮ ಸ್ವರಾಜ್ಯದ ಕಲ್ಪನೆಯೇ ಬೇರೆಯಾಗಿತ್ತು.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her