ವಿಷಯಕ್ಕೆ ಹೋಗಿ

ಅನ್ವಯಿಕ ಸಿದ್ಧಾಂತಗಳು, ಮಾಧ್ಯಮ ಯಶೋಗಾಥೆ ಮತ್ತು ಸಮರ್ಥ ಗುರುವಿನ ನಿರೀಕ್ಷೆ...

ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಒಂದು ತಿಂಗಳ ಇಂಟನರ್್ಶಿಪ್ಗಾಗಿ ಸೇರಿದ್ದ ದಿನಗಳು. ಪತ್ರಿಕೋದ್ಯಮದಲ್ಲಿ ಮೂರು ವರ್ಷದ ಡಿಗ್ರಿ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಕೋಸರ್ಿನ ಒಂದು ವರ್ಷದ ಅವಧಿ ಪೂರ್ಣಗೊಂಡಿತ್ತು. ಇನ್ನೊಂದು ವರ್ಷದ ಅಧ್ಯಯನ ಬಾಕಿಯಿತ್ತು.

ಮಂಗಳೂರು ಡೆಕ್ಕನ್ ಹೆರಾಲ್ಡ್ನ ಮುಖ್ಯಸ್ಥ ರೊನಾಲ್ಡ್ ಫನರ್ಾಂಡೀಸ್ ನನ್ನನ್ನು ಕರೆದು ಒಂದು ಉದ್ದದ ಪತ್ರಿಕಾ ಹೇಳಿಕೆಯನ್ನು ಕೊಟ್ಟು ಅದರ ಆಧಾರದಲ್ಲಿ ಚುಟುಕು ಸುದ್ದಿಯೊಂದನ್ನು ಬರೆಯಲು ಹೇಳಿದರು. ಪತ್ರಿಕಾ ಹೇಳಿಕೆಯನ್ನು ಆಮೂಲಾಗ್ರವಾಗಿ ಓದಿದ ನನಗೆ ಆ ಪತ್ರಿಕಾ ಹೇಳಿಕೆಯಲ್ಲಿ ಸುದ್ದಿ ಯಾವುದು, ಸುದ್ದಿಯಲ್ಲದ್ದು ಯಾವುದು ಎಂಬುದರ ವ್ಯತ್ಯಾಸ ಫಕ್ಕನೆ ಹೊಳೆಯಲಿಲ್ಲ. ಪತ್ರಿಕೋದ್ಯಮ ತರಗತಿಗಳಲ್ಲಿ ಆರಂಭದಲ್ಲಿಯೇ ಬೋಧಿಸುವ "5 ಡಬ್ಲ್ಯೂ 1 ಎಚ್ "ಪಾಠಗಳು ಆ ಹೊತ್ತಿಗೆ ನನಗೆ ಸಾಕಷ್ಟು ಬಾರಿ ಆಗಿದ್ದವು. "ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಆದರೆ ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ "ಎಂಬ ಪಾಠಗಳಂತೂ ಬೋರು ಹೊಡೆಸುವಷ್ಟು ಆಗಿದ್ದವು. ಹೀಗಿದ್ದರೂ ರೊನಾಲ್ಡ್ ಅವರು ಕೊಟ್ಟ ಪತ್ರಿಕಾ ಹೇಳಿಕೆಯಲ್ಲಿ "5ಡಬ್ಲ್ಯೂ "ಯಾವುದು "1ಎಚ್" ಯಾವುದು ಎಂಬ ಗೊಂದಲ ಬಗೆಹರಿಯುತ್ತಿರಲಿಲ್ಲ. ಅಷ್ಟೊಂದು ದೊಡ್ಡ ಪತ್ರಿಕಾ ಹೇಳಿಕೆಯನ್ನು ನೂರಿನ್ನೂರು ಪದಗಳಲ್ಲಿ ಬರೆಯುವುದು ಹೇಗೆಂಬುದೂ ಬಗೆಹರಿಯುತ್ತಿರಲಿಲ್ಲ.

ಹೀಗೇ ತಡಕಾಡುತ್ತಿದ್ದವನನ್ನು ಡೆಕ್ಕನ್ ಹೆರಾಲ್ಡ್ನಲ್ಲಿ ಹಿರಿಯ ವರದಿಗಾರರಾಗಿರುವ ಸಿಬಂತಿ ಪದ್ಮನಾಭ ತಮ್ಮ ಬಳಿ ಕರೆದು "ಏನಯ್ಯಾ, ಯಾಕೆ ಒಂದು ವರದಿ ಬರೆಯಲು ಅಷ್ಟೊಂದು ಕಷ್ಟ ಪಡುತ್ತಿದ್ದೀಯಾ?" ಎಂದು ಕೇಳಿದರು. "ವರದಿ ಬರೆಯಲು ಕಷ್ಟ ಏನಿಲ್ಲ, ಹಿಂದೆಯೆಲ್ಲಾ ಕೆಲವು ವರದಿಗಳನ್ನು ಬರೆದಿದ್ದೇನೆ. ಆದರೂ ಇದೊಂದು ಮಾತ್ರ ಏಕೋ ತಲೆ ಕೆಡಿಸುತ್ತಿದೆ ಎಂದೆ. "ಸಿಬಂತಿ ಪದ್ಮನಾಭ ಆಗ ಕರೆದು ಹೇಳಿದ ಕೆಲವು ಮಾತುಗಳು ಇನ್ನೂ ತಲೆಯಲ್ಲಿ ಗುಂಯ್ ಗುಡುತ್ತಿವೆ.

"ಪತ್ರಿಕೋದ್ಯಮದ ತರಗತಿಯಲ್ಲಿ ಕಲಿಸುವ ಮಾಧ್ಯಮ ಸಂಬಂಧಿ ಸಿದ್ಧಾಂತಗಳು ಕೆಲಸಕ್ಕೆ ಬಾರವು ಎಂದು ನಾನು ಹೇಳುವುದಿಲ್ಲ. ಆದರೆ ಅಂತಹ ಹಲವಾರು ಸಿದ್ಧಾಂತಗಳನ್ನು ಕಲಿತ ನೀವು ಅವುಗಳನ್ನು ಪ್ರಾಯೋಗಿಕವಾಗಿ ಬಳಸಲು ಅಸಮರ್ಥರಾದರೆ ಕಷ್ಟ. ನೀನೇ ನೋಡು, ಆ ಪತ್ರಿಕಾ ಹೇಳಿಕೆಯಲ್ಲಿ ಇವತ್ತಿನ ಸಂದರ್ಭ ಮತ್ತು ಪ್ರದೇಶಕ್ಕೆ ಸೂಕ್ತವಾದ, ಅಗತ್ಯವಾದ ಕೆಲವು ಅಂಶಗಳನ್ನು ಆರಿಸಿ ವರದಿ ಬರೆಯಬೇಕಾಗಿತ್ತು. ಆದರೆ ನೀನು ಅದೆಷ್ಟು ಒದ್ದಾಡಿದೆ? ಪತ್ರಿಕಾ ಹೇಳಿಕೆಗಳು ಎಷ್ಟೇ ದೀರ್ಘವಾಗಿರಬಹುದು, ಅವನ್ನೆಲ್ಲಾ ಯಥಾವತ್ತಾಗಿ ಪತ್ರಿಕೆಯಲ್ಲಿ ಪ್ರಕಟಿಸಲು ಆಗುವುದಿಲ್ಲ. ಪತ್ರಿಕಾ ಹೇಳಿಕೆಗಳನ್ನು ಒಮ್ಮೆ ಸಮಗ್ರವಾಗಿ ಓದಿ, ನಮ್ಮ ಓದುಗರಿಗೆ, ನಮ್ಮ ಪ್ರದೇಶಕ್ಕೆ, ಇವತ್ತಿನ ಸಂದರ್ಭಕ್ಕೆ ಯಾವುದು ತೀರಾ ಅವಶ್ಯಕತೆಯಿದೆ ಅಂತ ಮನವರಿಕೆಯಾಗುತ್ತದೆಯೋ ಅದನ್ನು ಮಾತ್ರ ವರದಿಯಲ್ಲಿ ಸೇರಿಸಬೇಕು. ಹಾಗೆ ನಮ್ಮ ಪ್ರದೇಶ, ಓದುಗರು, ಸಂದರ್ಭಕ್ಕೆ ಸೂಕ್ತ ಯಾವುದು, ಯಾವುದಲ್ಲ ಎಂಬುದನ್ನು ನಿರ್ಧರಿಸುವಾಗ ನಮ್ಮ ಸುತ್ತಲಿನ ಸಂದರ್ಭಗಳ ಸ್ಪಷ್ಟ ಅರಿವು ಬೇಕು. ಸುತ್ತಲ ಜಗತ್ತನ್ನು ಸೂಕ್ಷ್ಮವಾಗಿ ಗಮನಿಸದವ ಒಳ್ಳೆಯ ವರದಿಗಾರ ಆಗಲಾರ..."

ಪದ್ಮನಾಭರ ಮಾತನ್ನು ಕೇಳಿಸಿಕೊಳ್ಳುತ್ತಿದ್ದವನಿಗೆ ನಾನು ಕಲಿಯುತ್ತಿರುವುದೇ ಬೇರೆ, ಪತ್ರಿಕಾವೃತ್ತಿ ನನ್ನಿಂದ ಅಪೇಕ್ಷಿಸುತ್ತಿರುವುದೇ ಬೇರೆ ಎಂದು ತೀವ್ರವಾಗಿ ಅನಿಸತೊಡಗಿತ್ತು. ಇತ್ತ ಸಿಬಂತಿ ಪದ್ಮನಾಭ ಮಾತಾಡುತ್ತಿದ್ದರು...

"...ನೀನು ಪುಸ್ತಕಗಳನ್ನು ಓದುತ್ತೀಯಾ ಅಂದುಕೊಂಡಿದ್ದೇನೆ. ಕನರ್ಾಟಕದಲ್ಲಿ ಪತ್ರಕರ್ತ ಆಗುವವನು ಅದು ಇಂಗ್ಲಿಷ್ ಇರಲಿ ಅಥವಾ ಕನ್ನಡವೇ ಆಗಿರಲಿ - ಕಾರಂತ, ತೇಜಸ್ವಿ, ನಾಗೇಶ ಹೆಗಡೆಯವರಂತಹ ಲೇಖಕ/ಬರಹಗಾರರ ಪುಸ್ತಕಗಳನ್ನು ಓದಲೇಬೇಕು. ಅಂಥವರ ಬರಹಗಳ ಪ್ರಭಾವ ಪತ್ರಕರ್ತನ ಮೇಲೆ ಇದ್ದರೆ, ಆತ ಬರೆಯುವ ವರದಿಯಲ್ಲಿ ಒಂದು ಗಾಂಭೀರ್ಯತೆ ಇದ್ದೇ ಇರುತ್ತದೆ. ಬೇಕಿದ್ದರೆ ನೀನೇ ನೋಡು, ಕಾರಂತರ ಬೆಟ್ಟದ ಜೀವ, ಚೋಮನ ದುಡಿ ಕಾದಂಬರಿ ಓದಿದ ಪತ್ರಕರ್ತ ಕನ್ನಡ ಕರಾವಳಿಯ ಜನಜೀವನವನ್ನು ಗ್ರಹಿಸುವ ಪರಿಯೇ ಬೇರೆಯಾಗಿರುತ್ತದೆ."

ಈ ಮೇಲಿನ ಅನುಭವ ಪತ್ರಿಕೋದ್ಯಮದ ತರಗತಿಗಳಲ್ಲಿ ಕಲಿಸುವ ಮಾಧ್ಯಮ ಸಿದ್ಧಾಂತಗಳು ಮತ್ತು ಅವುಗಳನ್ನು ವೃತ್ತಿಯಲ್ಲಿ ಹೇಗೆ ಅನ್ವಯಿಸುವುದು ಎಂಬುದರ ಬಗ್ಗೆ ನನ್ನ ಗ್ರಹಿಕೆಯನ್ನು ಬದಲಾಯಿಸಿತು.

***

ಕನ್ನಡದ ಹೆಮ್ಮೆಯ ಪತ್ರಕರ್ತ ಶ್ರೀ ಪಡ್ರೆಯವರ ಬಗ್ಗೆ ಮತ್ತವರ ಅಡಿಕೆ ಪತ್ರಿಕೆಯ ಬಗ್ಗೆ ಗೊತ್ತಿಲ್ಲದವರಿಲ್ಲ. ಭಾರತದ ಮಾಧ್ಯಮ ಲೋಕದ ಭಿನ್ನ ಪಯಣಿಗರ ಸಾಲಿನಲ್ಲಿ ಶ್ರೀ ಪಡ್ರೆಯವರೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಒಮ್ಮೆ ಅಡಿಕೆ ಪತ್ರಿಕೆಯ ಕಛೇರಿಯಲ್ಲಿ (ಪುತ್ತೂರಿನ ಏಳ್ಮುಡಿಯ ಭಟ್ಸ್ ಬಿಲ್ಡಿಂಗ್) ಅವರ ಜೊತೆ ಮಾತನಾಡುವ ಅವಕಾಶ ದೊರಕಿತ್ತು. ಶ್ರೀ ಪಡ್ರೆ ತಮ್ಮ ಅಡಿಕೆ ಪತ್ರಿಕೆಯ ಆರಂಭದ ದಿನದಿಂದ ಇಲ್ಲಿಯವರೆಗೆ ಎದುರಿಸಿದ ಸವಾಲು, ಕಂಡುಕೊಂಡ ಸಾಧ್ಯತೆಗಳ ಬಗ್ಗೆ ಸಾದ್ಯಂತವಾಗಿ ವಿವರಿಸುತ್ತಿದ್ದರು.

"ನೋಡು ವಿಜಯ್, ನಾವು ಅಡಿಕೆ ಪತ್ರಿಕೆಯನ್ನು ಆರಂಭಿಸಿದ ಕಾಲ 1988ನೆಯ ಇಸವಿ. ಆವತ್ತಿನ ಪರಿಸ್ಥಿತಿ ಹೇಗಿತ್ತು ಅಂದರೆ ಕೃಷಿ ವಿಚಾರಗಳನ್ನು ಬರೆಯುವ ಪತ್ರಿಕೆಯೊಂದು, ಕೃಷಿಕರಿಂದ ಬರುವ ಬರಹಗಳನ್ನು ನೆಚ್ಚಿಕೊಂಡು, ಕೃಷಿಕರನ್ನೇ ತನ್ನ ಮುಖ್ಯ ಗುರಿಯನ್ನಾಗಿಟ್ಟುಕೊಂಡು ಬಹಳ ದಿನಗಳ ಕಾಲ ನಡೆಯಲು ಸಾಧ್ಯವೇ ಇಲ್ಲ ಎಂದು ಅನೇಕ ಮಂದಿ ಮಾಧ್ಯಮ ಪಂಡಿತರುಗಳು ಭವಿಷ್ಯ ಹೇಳಿದ್ದರು. ಅವರು ಹಾಗೆ ಹೇಳುತ್ತಿದ್ದಾರೆ ಎಂದು ಸುಮ್ಮನೆ ಕುಳಿತುಕೊಳ್ಳುವ ಮನಸ್ಸು ನಮ್ಮದಾಗಿರಲಿಲ್ಲ. ನಾವು ಇದನ್ನೊಂದು ಸವಾಲು ಅಂತಲೇ ಸ್ವೀಕರಿಸಿ ಪತ್ರಿಕೆಯನ್ನು ಆರಂಭಿಸಿದೆವು. ಪತ್ರಿಕೆ ಇವತ್ತು 22ರ ಹರೆಯದಲ್ಲಿದೆ..."

ಕರ್ನಾಟಕ 1988ರವರೆಗೆ ಆದ ಕೃಷಿ ಸಂಬಂಧಿ ಸಂವಹನಗಳಲ್ಲಿ ಹೆಚ್ಚಿನವು ಕೃಷಿ ವಿಶ್ವವಿದ್ಯಾಲಯಗಳ ವಿಜ್ಞಾನಿಗಳಿಂದ ರೈತರೆಡೆಗೆ ಹರಿದುಬಂದಂತಹವು. ಅಲ್ಲಿಯವರೆಗೆ ಕೃಷಿಕರಿಂದ ವಿಜ್ಞಾನಿಗಳೆಡೆ ಮತ್ತು ಕೃಷಿಕರಿಂದ ಕೃಷಿಕರೆಡೆಗೆ ಸಂವಹನ ತೀರಾ ಕಡಿಮೆ ಪ್ರಮಾಣದಲ್ಲಿ ಆಗುತ್ತಿತ್ತು. ರೈತನಿಗೆ ಏನು ಬೇಕು, ಏನು ಬೇಡ ಎಂಬುದನ್ನು ವಿಜ್ಞಾನಿಗಳೇ ನಿರ್ಧರಿಸುತ್ತಿದ್ದರು. ಅದಲ್ಲದೆ ಹೊಲದಲ್ಲಿ, ತೋಟದಲ್ಲಿ ಬೆವರು ಸುರಿಸುವ ರೈತ ಯಾವತ್ತೂ ಬರೆಯಲಾರ, ವಿಶ್ವವಿದ್ಯಾಲಯಗಳ ಛೇಂಬರಿನಿಂದ ರೈತರಿಗಾಗಿ ಬರೆಯುವ ವಿಜ್ಞಾನಿ ಹೊಲಕ್ಕೋ ತೋಟಕ್ಕೋ ಬಂದು ಬೆವರು ಹರಿಸಲಾರ. ಪರಿಸ್ಥಿತಿ ಹೀಗಿರುವಾಗ ರೈತನ ಬೇಕು ಬೇಡಗಳು ಸರಿಯಾಗಿ ತಿಳಿಯುವುದಾದರೂ ಹೇಗೆ ಎಂಬ ಪರಿಸ್ಥಿತಿ ಇತ್ತು. ಇಂಥ ಒಂದು ಕೊರತೆಯನ್ನು ತುಂಬುವ ಉದ್ದೇಶದಿಂದ ಹುಟ್ಟಿಕೊಂಡ ಅಡಿಕೆ ಪತ್ರಿಕೆ ಅನಂತರ ಮಾಡಿದ ಕೆಲಸ ಇಡೀ ಪತ್ರಿಕಾಸಮೂಹವೇ ಮೂಗಿನಮೇಲೆ ಬೆರಳಿಟ್ಟುಕೊಂಡು ನೋಡುವಂಥದ್ದು.

"...ಅಡಿಕೆ ಪತ್ರಿಕೆ ಆರಂಭವಾದಾಗ ರೈತರೇನೂ ಮುಗಿಬಿದ್ದು ತಮ್ಮ ಕೃಷಿ ಅನುಭವಗಳನ್ನು ಪತ್ರಿಕೆಗೆ ಬರೆದು ಕಳುಹಿಸಲಿಲ್ಲ. ರೈತರಲ್ಲಿ ಬರೆಯುವ ಹುಮ್ಮಸ್ಸು ತುಂಬುವ ಪ್ರಯತ್ನಕ್ಕೆ ಕೈಹಾಕಿದ ಅಡಿಕೆ ಪತ್ರಿಕೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳ ಹಳ್ಳಿಗಳಲ್ಲಿ ಕೃಷಿಕರ ಕೈಗೆ ಲೇಖನಿ ಎಂಬ ವಿನೂತನ ಶಿಬಿರಗಳನ್ನು ಸಂಘಟಿಸಿತು. ಈ ಶಿಬಿರಗಳಲ್ಲಿ ಪತ್ರಿಕಾವೃತ್ತಿಯ ಮೂಲ ಪಾಠಗಳನ್ನು ಕೃಷಿಕರಿಗೆ ಅಡಿಕೆ ಪತ್ರಿಕೆ ಬಳಗ ತನ್ನ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು ಹೇಳಿಕೊಟ್ಟಿತು. ಮುಂದೆ ಕೃಷಿಕರ ಕೈಗೆ ಲೇಖನಿ ಒಂದು ಸಾಮಾಜಿಕ ಆಂದೋಲನದ ರೂಪ ಪಡೆದುಕೊಂಡಿತು. ಕನ್ನಡದಲ್ಲಿ ಅಲ್ಲಿಯವರೆಗೆ ಚಾಲ್ತಿಯಲ್ಲಿಲ್ಲದ ಸ್ವಸಹಾಯ ಪತ್ರಿಕಾವೃತ್ತಿಯನ್ನು ಪರಿಚಯಿಸಿದ್ದೇ ಅಡಿಕೆ ಪತ್ರಿಕೆ. ಮೊದಲು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮೂಲಕ ಪ್ರಕಟವಾಗುತ್ತಿದ್ದ ಅಡಿಕೆ ಪತ್ರಿಕೆ ನಂತರ ಫಾರ್ಮರ್ ಫಸ್ಟ್ ಟ್ರಸ್ಟ್ ಮೂಲಕ ಪ್ರಕಟವಾಗಲು ಆರಂಭಿಸಿತು. ಅಡಿಕೆ ಪತ್ರಿಕೆಯ ಸಂಪಾದಕೀಯ ಬಳಗದಲ್ಲಿರುವವರು, ಪತ್ರಿಕೆಗೆ ಲೇಖನಗಳನ್ನು ಬರೆಯುವವರು ರೈತರೇ ಆಗಿದ್ದಾರೆ. ಅವರಿಗೆ ಇಲ್ಲಿನ ಮಣ್ಣಿನ ಗುಣ ಬಹಳ ಸ್ಪಷ್ಟವಾಗಿ ತಿಳಿದಿದೆ. ಪತ್ರಿಕೆಯನ್ನು ಓದುವ ದೊಡ್ಡ ವರ್ಗ ಕೂಡ ರೈತರೇ ಆಗಿದ್ದಾರೆ..."

"...ಇವತ್ತು ರೈತ ಅಂದಕೂಡಲೇ ನಮ್ಮ ಕಣ್ಣಮುಂದೆ ಬರುವುದು ಸರಣಿ ಆತ್ಮಹತ್ಯೆಗಳು, ಆಥರ್ಿಕವಾಗಿ ಶಕ್ತಿ ಇಲ್ಲದಿರುವಿಕೆ. ಒಟ್ಟಿನಲ್ಲಿ ಕೃಷಿಬದುಕು ನಮ್ಮ ಮುಂದೆ ನೀಡುವುದೇ ನಕಾರಾತ್ಮಕ ಚಿತ್ರಣವನ್ನು ಎಂಬಂತಹ ಪರಿಸ್ಥಿತಿಯನ್ನು ಇವತ್ತಿನ ಆಥರ್ಿಕ ಮತ್ತು ರಾಜಕೀಯ ವ್ಯವಸ್ಥೆ ಸೃಷ್ಟಿಸಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ನಾವೊಂದು ಮಹತ್ವದ ನಿಧರ್ಾರವನ್ನು ತೆಗೆದುಕೊಂಡೆವು. ನಾವು ಇನ್ನುಮುಂದೆ ಕೃಷಿಬದುಕಿನ ಬಗ್ಗೆ ಕೇವಲ ನಕಾರಾತ್ಮಕ ಚಿತ್ರಣಗಳನ್ನು ಮಾತ್ರ ಕೊಡುವುದಿಲ್ಲ. ಬದಲಿಗೆ, ಕೃಷಿ ಬದುಕಿನಲ್ಲಿ ಹೊಸ ಹೊಸ ಅನ್ವೇಷಣೆಗಳನ್ನು ಮಾಡಿದ, ಕೃಷಿ ಜೀವನದಲ್ಲಿ ಬದುಕಿನ ಸಾರ್ಥಕ್ಯವನ್ನು ಕಂಡ ರೈತರ ಯಶೋಗಾಥೆಗಳನ್ನು ನಮ್ಮ ಓದುಗರ ಮುಂದಿಡುವ ಕೆಲಸ ಆರಂಭಿಸಿದೆವು. ರೈತರ ಬೌದ್ಧಿಕ ಕೆಲಸ ಮತ್ತು ಶ್ರಮಜೀವನಕ್ಕೆ ಗೌರವ ಸಿಗಬೇಕು ಎಂಬ ಧ್ಯೇಯವನ್ನಿಟ್ಟುಕೊಂಡು ನಮ್ಮ ಬರವಣಿಗೆಯನ್ನು ಬೆಳೆಸಿದೆವು..."

ಶ್ರೀ ಪಡ್ರೆ ಅಡಿಕೆ ಪತ್ರಿಕೆ ಸಾಧಿಸಿದ ಇನ್ನೂ ಅನೇಕ ಅದ್ಭುತಗಳನ್ನು ಹೇಳಿದರು. ಅದರಲ್ಲಿ ಜಲಸಾಕ್ಷರತೆ ಮೂಡಿಸುವಲ್ಲಿ ಪತ್ರಿಕೆಯ ಕಾರ್ಯಗಳು ಮಹತ್ತರವಾದದ್ದು.

ನೆಲಜಲ ಉಳಿಸಲು ನೂರು ವಿಧಿ ಎಂಬ ಅಂಕಣ ಮಾಲಿಕೆಯ ಮೂಲಕ ಅಡಿಕೆ ಪತ್ರಿಕೆ ಕನ್ನಡ ನಾಡಿನಲ್ಲಿ ಮೂಡಿಸಿದ ಜಲಸಾಕ್ಷರತೆ ಚರಿತ್ರಾರ್ಹ.

ಯಶಸ್ವಿಯಾಗಿ ಮಳೆನೀರನ್ನು ತಮ್ಮ ಜಮೀನಿನಲ್ಲಿ ಇಂಗಿಸಿದ ರೈತರ ಯಶೋಗಾಥೆಗಳನ್ನು ತನ್ನ ಪ್ರತಿ ಸಂಚಿಕೆಯಲ್ಲೂ ವರದಿ ಮಾಡಲು ಆರಂಭಿಸಿದ ಅಡಿಕೆ ಪತ್ರಿಕೆ ಒಟ್ಟೂ ನೂರು ತಿಂಗಳುಗಳ ಅವಧಿಯಲ್ಲಿ ನಾಡಿನ ಮೂಲೆಮೂಲೆಗಳಲ್ಲಿ ನಡೆಯುತ್ತಿರುವ ಜಲಕೊಯ್ಲಿನ ಪ್ರಯತ್ನಗಳನ್ನು ತನ್ನ ಓದುಗರಿಗೆ ನೀಡಿತ್ತು. ತನ್ಮೂಲಕ ತನ್ನ ಓದುಗರನ್ನು ಜಲಕೊಯ್ಲಿಗೆ ಹಚ್ಚಿತ್ತು. ಒಂದು ಪತ್ರಿಕೆ ತನ್ನ ಬರಹಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುವುದು ಅಂದರೆ ಇದೇ.

ಅಡಿಕೆ ಪತ್ರಿಕೆಯ ಯಶೋಗಾಥೆ ಪತ್ರಿಕೋದ್ಯಮವೆಂದರೆ ಅವರಿವರ ಹುಳುಕಗಳನ್ನು ಬರೆಯುತ್ತ ಕುಳಿತಿರುವವರ ಅಡ್ಡೆ, ಟೀಕೆ ಮಾಡುವುದೇ ಪತ್ರಿಕಾವೃತ್ತಿ, ಪತ್ರಕರ್ತರ ಕೆಲಸದಿಂದ ಯಾವುದೇ ರೀತಿಯ ಸಾಮಾಜಿಕ ಬದಲಾವಣೆ ಅಸಾಧ್ಯ ಎಂಬ ನಂಬಿಕೆಗಳನ್ನು ಕಿತ್ತುಹಾಕಲು ಸಾಕು.

***

ಇವತ್ತು ಪತ್ರಿಕೋದ್ಯಮವನ್ನು ನಾಡಿನ ಅನೇಕ ಕಾಲೇಜುಗಳಲ್ಲಿ ಶಾಸ್ತ್ರೀಯವಾಗಿ ಕಲಿಸಲಾಗುತ್ತಿದೆ. ಅನೇಕ ಕಡೆ ಬಹಳ ಪರಿಣಾಮಕಾರಿಯಾಗಿ ಪತ್ರಿಕೋದ್ಯಮವನ್ನು ಬೋಧಿಸುವ ಅಧ್ಯಾಪಕರಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಸಾಕಷ್ಟು ಮಂದಿ ಅಸಮರ್ಥ ಅಧ್ಯಾಪಕರೂ ಇದ್ದಾರೆ.

ಪತ್ರಿಕಾವೃತ್ತಿಯ ಬಗ್ಗೆ ಒಂದಷ್ಟು ಬೆರಗು, ಗೌರವ ಮತ್ತು ಆ ವೃತ್ತಿ ಮುಂದೊಡ್ಡುವ ಸವಾಲುಗಳ ಬಗ್ಗೆ ಪರಿಣಾಮಕಾರಿಯಾಗಿ ಅಧ್ಯಾಪನ ಮಾಡಬೇಕಾದವರು "ಪತ್ರಕರ್ತರಿಗೆ ಸರಿಯಾಗಿ ಝಾಡಿಸಿ ಒದೆಯಬೇಕು ಅಂತ ತರಗತಿಗಳಲ್ಲೇ ಹೇಳುತ್ತಾರೆ "ಎಂಬ ವರದಿಗಳೂ ಪತ್ರಿಕೆಗಳಲ್ಲಿ ಬಂದಿವೆ. ಇಂಥವರ ತರಗತಿಗಳಲ್ಲಿ ಪಳಗುವ ವಿದ್ಯಾರ್ಥಿಗಳು ಮುಂದೆ ಅದೆಂಥ ರೀತಿಯಲ್ಲಿ ತಮ್ಮ ವೃತ್ತಿಯನ್ನು ನಿಭಾಯಿಸಬಹುದು? ಅದಕ್ಕಿಂತಲೂ ಮಿಗಿಲಾಗಿ, ಪತ್ರಿಕಾವೃತ್ತಿಯ ಬಗ್ಗೆ ಅವರ ಮನದಲ್ಲಿ ಎಂಥಹ ಭಾವನೆ ಮೂಡಬಹುದು?

ಅಡಿಕೆ ಪತ್ರಿಕೆಯಂತಹ ಮಾಸಿಕವೊಂದು ಏಕಾಂಗಿಯಾಗಿ ಮಾಡುವ ಕೆಲಸಗಳ ಬಗ್ಗೆ, ಪಿ ಸಾಯಿನಾಥ್, ನಾಗೇಶ ಹೆಗಡೆಯವರಂತೆ ಮಾಧ್ಯಮ ಲೋಕದಲ್ಲಿ ತಮ್ಮದೇ ಆದ ಹೆದ್ದಾರಿ ಸೃಷ್ಟಿಸಿದ ಪತ್ರಕರ್ತರ ಬಗ್ಗೆ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆ ತುತರ್ು ಪರಿಸ್ಥಿತಿಯ ಸಂದರ್ಭದಲ್ಲಿ ಕೈಗೊಂಡ ಸಾಹಸಗಳ ಬಗ್ಗೆ, ಸಿವಿಲ್ ಸೊಸೈಟಿ ಎಂಬ ಪತ್ರಿಕೆ ಪ್ರಕಟಿಸುವ ಅಭ್ಯುದಯ ವರದಿಗಳ ಬಗ್ಗೆ, ಡೌನ್ ಟು ಅಥರ್್ ಪತ್ರಿಕೆಯ ಪರಿಸರ ಸಂಬಂಧಿ ಬರಹಗಳಿಗಿರುವ ಲೋಕಮಾನ್ಯತೆಯ ಬಗ್ಗೆ... ತಮ್ಮ ವಿದ್ಯಾಥರ್ಿಗಳಿಗೆ ಅನುಭವಿಸಿ ಹೇಳುವ ಅಧ್ಯಾಪಕರು ನಮಗೆ ಬೇಕು. ಅದು ಬಿಟ್ಟು ಪತ್ರಿಕಾವೃತ್ತಿಯ ಬಗ್ಗೆ ಆರಂಭದಲ್ಲೇ ಕೀಳರಿಮೆ ಮೂಡಿಸುವವರು ಖಂಡಿತಾ ಬೇಡ. ಹಾಗಂತ ಪತ್ರಿಕಾವೃತ್ತಿಯಲ್ಲಿ ಕೊಳಕುಗಳು ಇಲ್ಲವೇ ಇಲ್ಲ ಅಂತಲ್ಲ. ಆದರೆ ಅದನ್ನು ಎದುರಿಸುವುದು ಹೇಗೆ ಅಂತ ಕಲಿಸುವುದು ವಿವೇಕಯುತವಾದದ್ದೇ ಹೊರತು, ಕೇವಲ ನಕಾರಾತ್ಮಕ ಸಂಗತಿಗಳನ್ನು ಮಾತ್ರ ಹೇಳಿ ವಿದ್ಯಾಥರ್ಿಗಳ ಆಸೆಯನ್ನೇ ಚಿವುಟಿಹಾಕುವುದು ಪತ್ರಿಕೋದ್ಯಮದ ಅಧ್ಯಾಪಕರಿಂದ ಆಗಬಾರದಲ್ಲ?

ಹಾಗೆ ಒಬ್ಬ ಅಧ್ಯಾಪಕ ಪತ್ರಿಕಾವೃತ್ತಿಯನ್ನು ಅನುಭವಿಸಿ ತನ್ನ ವಿದ್ಯಾಥರ್ಿಗಳಿಗೆ ಬೋಧಿಸಬೇಕು ಅಂದರೆ ಆತ ಮೊದಲು ಸ್ವಲ್ಪ ವರ್ಷಗಳಾದರೂ ಮಾಧ್ಯಮಗಳಲ್ಲಿ ದುಡಿದ ಅನುಭವ ಇದ್ದವನಾಗಿರಬೇಕು. ಅಂಥವರ ಗರಡಿಯಲ್ಲಿ ಪಳಗಿದ ವಿದ್ಯಾಥರ್ಿಗಳು ಖಂಡಿತ ಉತ್ತಮ ಪತ್ರಕರ್ತರಾಗಬಲ್ಲರು.

ಮಣಿಪಾಲದ ವರದೇಶ್ ಹಿರೇಗಂಗೆ, ಉಜಿರೆಯ ಭಾಸ್ಕರ ಹೆಗಡೆ, ಡಾ. ನಿರಂಜನ ವಾನಳ್ಳಿ, ಪ್ರೊ. ಕೆ ವಿ ನಾಗರಾಜ್, ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದ ದಿವಂಗತ ಡಾ. ಶ್ರೀಧರ್ ಇವರೆಲ್ಲ ಹಿಂದೆ ಒಂದೊಂದು ಪತ್ರಿಕೆಗಳಲ್ಲಿ ದುಡಿದವರೇ. ಅವರ ಪಾಠಗಳಲ್ಲಿ ಅವರು ಹಿಂದೆ ಪತ್ರಿಕೆಗಳಿಗೆ ಕೆಲಸ ಮಾಡಿದ ಅನುಭವದ ಕಥನಗಳು ಸಾಕಷ್ಟು ಬರುತ್ತವೆ ಎಂದು ನಂಬಿದ್ದೇನೆ. ಬಹುಷಃ ಇದೇ ಕಾರಣಕ್ಕೆ ಇವರ ವಿದ್ಯಾಥರ್ಿಗಳು ಕನ್ನಡದ ಎಲ್ಲ ಪತ್ರಿಕೆ ಮತ್ತು ಟಿವಿ ಚಾನಲ್ಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಸಾಕಷ್ಟು ಹೆಸರು ಮಾಡಿದ್ದಾರೆ.

ಇವತ್ತಿನ ಪತ್ರಿಕೋದ್ಯಮದ ವಿದ್ಯಾರ್ಥಿಗಳು ತರಗತಿಗಳಲ್ಲಿ ಬೇಕಿರುವುದು ಗಟ್ಟಿಯಾದ ಮಾಧ್ಯಮ ಸಿದ್ಧಾಂತಗಳು, ಅವುಗಳನ್ನು ವೃತ್ತಿಯಲ್ಲಿ ಅನ್ವಯ ಮಾಡುವ ಬಗೆ, ನಾಡಿನೆಲ್ಲೆಡೆ ಕಾಣಸಿಗುವ ಮಾಧ್ಯಮದ ಯಶೋಗಾಥೆಗಳು. ಮತ್ತು ಅವೆಲ್ಲವನ್ನು ಪರಿಣಾಮಕಾರಿಯಾಗಿ ಕಲಿಸುವ ಒಬ್ಬ ಗುರು.

- ವಿಜಯ್ ಜೋಷಿ

ಕಾಮೆಂಟ್‌ಗಳು

ವಿ.ರಾ.ಹೆ. ಹೇಳಿದ್ದಾರೆ…
ಈ ಉತ್ಸಾಹ, ತುಡಿತ, ಪ್ರಾಮಾಣಿಕತೆ ಪತ್ರಿಕೋದ್ಯಮ ಕೆರಿಯರ್ ನ ಕೊನೆಯವರೆಗೂ ಇರಲಿ ಅಂತ ಆಶಿಸುತ್ತೇನೆ..
BIDIRE ಹೇಳಿದ್ದಾರೆ…
joshiyanna nimma e lekhana patrikodyama vidhyartigala kannu teresuvantadu, patrikodyama vidhyartigallanu chintanege olapadisuvanta lekhanagalu nimma lekhani enda mattastu mudli .........
ALL THE BEST
santosh naikಹೇಳಿದ್ದಾರೆ…
ತುಂಬಾ ಚೆನ್ನಾಗಿದೆ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ