ವಿಷಯಕ್ಕೆ ಹೋಗಿ

ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದೇನೆ!

ದೇವರಾಣೆಗೂ ಹೌದು ನಾನು ಆತ್ಮಹತ್ಯೆಯ ಬಗ್ಗೆಯೇ ಯೋಚಿಸುತ್ತಿದ್ದೇನೆ. ಇದು ಭಾರತೀಯ ಕಾನೂನಿನ ಪ್ರಕಾರ ತಪ್ಪು ಅಂತ ಚೆನ್ನಾಗಿ ಗೊತ್ತು. ಆತ್ಮಹತ್ಯೆಗೆ ಯತ್ನಿಸಿ ಒಂದು ವೇಳೆ ಅದರಲ್ಲಿ ಸಫಲನಾಗದಿದ್ದರೆ ಭಾರತೀಯ ದಂಡಸಂಹಿತೆಯ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯ ಮೇಲೆ ಕೇಸು ಹಾಕಬಹುದು, ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾದರೆ ಆ ವ್ಯಕ್ತಿಗೆ ಶಿಕ್ಷೆಯನ್ನೂ ವಿಧಿಸಬಹುದು ಅಂತಲೂ ಗೊತ್ತಿದೆ. ಅದಲ್ಲದೆ, ಇನ್ನೊಬ್ಬ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸುವುದು ಕೂಡ ಕಾನೂನಿನ ಪ್ರಕಾರ ಮತ್ತು ನೈತಿಕ ದೃಷ್ಟಿಯಿಂದಲೂ ಅಪರಾಧ ಎಂಬ ಅರಿವೂ ಇದೆ.

ಆದರೂ 'ಆತ್ಮಹತ್ಯೆ'ಯ ಬಗ್ಗೆಯೇ ಯೋಚಿಸುತ್ತಿದ್ದೇನೆ! ಅನುಮಾನ ಬೇಡ.

ದಿನಂಪ್ರತಿ ಪತ್ರಿಗಳಲ್ಲಿ ಮತ್ತು ವಾರ್ತಾ ವಾಹಿನಿಗಳಲ್ಲಿ ಆತ್ಮಹತ್ಯೆಯ ವರದಿಗಳನ್ನು ನೋಡಿ, ಕೇಳಿ, ಓದಿ ಬೇಸರ ಮೂಡಿದೆ. ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಕೀಟನಾಶಕ ಸೇವಿಸಿಯೋ ಅಥವಾ ನೇಣು ಬಿಗಿದುಕೊಂಡೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮ ನಿರೀಕ್ಷೆಗೆ ತಕ್ಕಂತೆ ಪರೀಕ್ಷೆಯಲ್ಲಿ ಅಂಕ ಬರಲಿಲ್ಲ ಅಂತಲೋ ಅಥವಾ ರ್ಯಾಂಕ್ ತಪ್ಪಿಹೋಯಿತು ಅಂತಲೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಪ್ರೇಮಿಗಳ ಆತ್ಮಹತ್ಯೆಯ ಬಗ್ಗೆ ಬರೆದರೆ ಜಾಗ ಹಾಳು, ಹೇಳಿದರೆ ಬಾಯಿ ಹಾಳು. ಅವಳು ಬೈದಳು, ಅವನು ಕೈಕೊಟ್ಟ ಹೀಗೆ ನಾನಾ ಕಾರಣ ಒಡ್ಡಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಆತ್ಮಹತ್ಯೆ ಪ್ರಕರಣ ನಡೆದಾಗಲೆಲ್ಲ ಅವರ ಪ್ರೀತಿಪಾತ್ರರ ನೋವನ್ನೂ ತಕ್ಕ ಮಟ್ಟಿಗೆ ನೋಡಿದ್ದೇನೆ.

ಆದರೂ ಅದೇ 'ಆತ್ಮಹತ್ಯೆ'ಯ ಬಗ್ಗೆ ಆಲೋಚಿಸುತ್ತಿದ್ದೇನೆ. ತೀವ್ರವಾಗಿ ಅದರ ಬಗ್ಗೆ ಯೋಚಿಸುತ್ತಿದ್ದೇನೆ. ಅದು ಎಷ್ಟರ ಮಟ್ಟಿಗೆ ಸರಿ, ಎಷ್ಟರ ಮಟ್ಟಿಗೆ ತಪ್ಪು... ಊಹೂಂ, ಇದ್ಯಾವುದೂ ನನಗೆ ಮುಖ್ಯವಲ್ಲ.

ಇಂಗ್ಲೀಷಿನ suicide ಎಂಬ ಪದಕ್ಕೆ ಸಂವಾದಿಯಾಗಿ ನಾವು ಕನ್ನಡದಲ್ಲಿ ಆತ್ಮಹತ್ಯೆ ಎಂಬ ಪದವನ್ನು ಬಳಸುತ್ತೇವೆ. ನಿರ್ದಿಷ್ಟವಾಗಿ ಯಾವಾಗ ನಾವು ಆತ್ಮಹತ್ಯೆ ಎಂಬ ಪದವನ್ನು ಬಳಸಲು ಪ್ರಾರಂಭಿಸಿದೆವು ಎಂಬುದು ನನಗೆ ತಿಳಿಯದ ವಿಚಾರ. ಇಂಗ್ಲಿಷಿನಲ್ಲಿ suicide ಎಂಬ ಪದಕ್ಕೆ ಸ್ವ ಇಚ್ಛೆಯಿಂದ ತನ್ನನ್ನು ತಾನೇ ಕೊಂದುಕೊಳ್ಳುವುದು ಎಂಬ ಅರ್ಥವಿದೆ. ಅದಲ್ಲದೆ ಆತ್ಮಘಾತಕ ಕ್ರಿಯೆ ಎಂಬ ಇನ್ನೊಂದು ಅರ್ಥವೂ ಇದೆ ಈ ಪದಕ್ಕೆ. ಕನ್ನಡದಲ್ಲಿಯೂ ನಾವು ಸುಮಾರು ಇದೇ ಅರ್ಥವನ್ನು ಬಿಂಬಿಸಲು ಆತ್ಮಹತ್ಯೆ ಎಂಬ ಪದವನ್ನು ಬಳಸುತ್ತಿದ್ದೇವೆ.

'ಆತ್ಮ' ಎನ್ನುವುದು ಇದೇಯಾ? ಇಲ್ಲವಾ? ಇದ್ದರೆ ಅದು ಹೇಗಿದೆ? ಅದರ ಆಕಾರ ಯಾವುದು? ಅದು ಎಲ್ಲಿದೆ? ಅದು ಗಂಡೋ, ಹೆಣ್ಣೋ? ಅದು ಎಲ್ಲಿಂದ ಬರುತ್ತದೆ? ಎಲ್ಲಿಗೆ ಹೋಗುತ್ತದೆ? ಆತ್ಮ ಅಂದರೆ ಏನು? ಪರಮಾತ್ಮ ಅಂದರೆ ಯಾರು? ಅವೆರಡಕ್ಕಿರುವ ವ್ಯತ್ಯಾಸ ಏನು? ಮನುಷ್ಯ, ಪ್ರಾಣಿ ಮತ್ತು ಪಕ್ಷಿಗಳಲ್ಲಿರುವ ಆತ್ಮನ ಸ್ವರೂಪ ಒಂದೇ ರೀತಿಯದಾ? ಅಥವಾ ಅವೆಲ್ಲಾ ಬೇರೆ ಬೇರೆ ಸ್ವರೂಪ ಹೊಂದಿರುವಂಥದ್ದಾ? ಆತ್ಮಕ್ಕೆ ಭೌತಿಕ ಅಸ್ತಿತ್ವ ಇದೆಯಾ?...

ಇಂಥದೆಲ್ಲಾ ವಿಚಾರಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು ಹಿಂದೂ ಪರಂಪರೆಯ ಋಷಿ, ಮುನಿಗಳು. ದೂರದ ಹಿಮಾಲಯದ ಕೊರೆಯುವ ಚಳಿಯಲ್ಲಿ, ಹಿಮಾಚ್ಛಾದಿತ ಶಿಖರಗಳಲ್ಲಿ, ಜಗತ್ತಿನ ಗಲಿಬಿಲಿಗಳಾವುದೂ ತಟ್ಟದ, ಕಾಮ-ಕಾಂಚಾಣದಂತಹ ಯಾವ ವಾಂಛೆಗಳೂ ತಟ್ಟದ ಹಿಮಕಣಿವೆಗಳಲ್ಲಿ ಕುಳಿತು ಅವರು ಆತ್ಮ, ಪರಮಾತ್ಮನ ಬಗ್ಗೆ ಸಾಕಷ್ಟು ಚಿಂತನೆ ನಡೆಸಿದ್ದಾರೆ. ಆ ಬಗ್ಗೆ ವಿಪುಲ ಸಾಹಿತ್ಯವೂ ಲಭ್ಯವಿದೆ.

ಆತ್ಮ ಎನ್ನುವುದು ಇದೆ. ಅದು ನಿರಾಕಾರ. ಅದು ಗಂಡೂ ಅಲ್ಲ, ಹೆಣ್ಣೂ ಅಲ್ಲ. (ನಪುಂಸಕವೂ ಅಲ್ಲ!) ಅದು ಎಲ್ಲಿಂದಲೂ ಬರುವುದಿಲ್ಲ, ಎಲ್ಲಿಗೂ ಹೋಗುವುದಿಲ್ಲ, ಬದಲಿಗೆ ಒಂದು ದೇಹದಿಂದ ಬಿಡುಗಡೆಯನ್ನು ಪಡೆದು ಇನ್ನೊಂದು ದೇಹಕ್ಕೆ ಪ್ರವೇಶ ಮಾಡುತ್ತದೆ. ಅದು ಸಕಲ ಜೀವಕೋಟಿಗಳಿಗೂ ಚೈತನ್ಯ ಸ್ವರೂಪಿಯಾದದ್ದು. ಮನುಷ್ಯನಿರಲಿ, ಪ್ರಾಣಿಗಳದಿರಲಿ ಅಥವಾ ಪಕ್ಷಿಗಳದೇ ಇರಲಿ ಆತ್ಮನ ಸ್ವರೂಪ ಒಂದೇ. ನಿರಾಕಾರ, ನಿರ್ಗುಣ...

ಹೀಗೆ ಸಾಕಷ್ಟು ವಿವರಗಳು ಹಿಂದೂ ಧರ್ಮಶಾಸ್ತ್ರಗಳಲ್ಲಿ ಆತ್ಮನ ಬಗ್ಗೆ ಬರುತ್ತವೆ. ಅಷ್ಟಕ್ಕೂ, ಹಿಂದೂ ತತ್ವ ಶಾಸ್ತ್ರದ ಪ್ರಮುಖ ಹುಡುಕಾಟವೇ ಆತ್ಮನ ಅಸ್ತಿತ್ವದ ಕುರಿತು. ಆತ್ಮವನ್ನು ಆಧಾರವಾಗಿಟ್ಟುಕೊಂಡೇ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಸಿದ್ಧಾಂತಗಳು ನಮ್ಮಲ್ಲಿ ಬಂದಿವೆ.

ಒಂದು ಕಥೆಯನ್ನು ಬಹುಷಃ ನಾವೆಲ್ಲರೂ ಕೇಳಿದ್ದೇವೆ. ಇದು ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದು ಗೊತ್ತಿಲ್ಲ. ಹಿಂದೆ ಔರಂಗಜೇಬನ ಸೈನಿಕರು ಕಾಶಿಯ ವಿಶ್ವನಾಥ ಮಂದಿರವನ್ನು ಒಡೆದ ನಂತರ ಕಾಶಿಯಲ್ಲಿ ಹರಿಯುವ ಗಂಗೆಯ ತಟದಲ್ಲಿ ಅಡ್ಡಾಡುತ್ತಿದ್ದರಂತೆ. ಆಗ ಅವರಿಗೆ ಧ್ಯಾನಮಗ್ನನಾಗಿದ್ದ ಒಬ್ಬ ಸಾಧು ಕಣ್ಣಿಗೆ ಬಿದ್ದನಂತೆ. ಆ ಸಾಧು ಧ್ಯಾನಮಗ್ನನಾಗಿದ್ದ ಕಾರಣ ಅವನಿಗೆ ಔರಂಗಜೇಬನ ಸೈನಿಕರು ಅಲ್ಲಿಗೆ ಬಂದಿದ್ದು ತಿಳಿಯಲಿಲ್ಲವಂತೆ. ಆತ ಧ್ಯಾನಮಗ್ನನಾಗಿಯೇ ಇದ್ದನಂತೆ. ಇದನ್ನು ಸಾಧುವಿನ ಅಹಂಕಾರ ಎಂದು ತಿಳಿದ ಸೈನಿಕರು ಆ ಸಾಧುವಿನ ಧ್ಯಾನವನ್ನು ಭಂಗಗೊಳಿಸಿ, ಅವನನ್ನು ಎಚ್ಚರಗೊಳಿಸಿ, ತಮ್ಮ ಖಡ್ಗದಿಂದ ಸಾಧುವನ್ನು ಕಡಿಯಲು ಮುಂದಾದರಂತೆ. ಅಂಥ ಸಂದರ್ಭದಲ್ಲೂ ಎದೆಗುಂದದ ಆ ಸಾಧು; "ನೀವು ನಿಮ್ಮ ಖಡ್ಗದಿಂದ ನನ್ನ ದೇಹವನ್ನು ಸಾಯಿಸಬಲ್ಲಿರಿ. ಆದರೆ ನನ್ನ ಆತ್ಮವನ್ನು ಕೊಲ್ಲುವ ಶಕ್ತಿ ನಿಮಗಿದೆಯಾ?" ಎಂದು ಕೇಳಿದನಂತೆ. ಆಗ ಸೈನಿಕರಿಗೆ ತಮ್ಮ ತಪ್ಪು ಹಾಗೂ ಅಜ್ಞಾನದ ಅರಿವಾಗಿ ಖಡ್ಗವನ್ನು ಪುನಃ ತಮ್ಮ ಓರೆಗೆ ಸಿಕ್ಕಿಸಿ ಅಲ್ಲಿಂದ ಕಾಲ್ಕಿತ್ತರಂತೆ.

ಅಂದರೆ ಎಲ್ಲ ಭಾರತೀಯ (ಅಥವಾ ಹಿಂದೂ) ತತ್ವಶಾಸ್ತ್ರಜ್ಞರ ಅಭಿಪ್ರಾಯವೂ ಒಂದೇ; ಆತ್ಮಕ್ಕೆ ಸಾವಿಲ್ಲ! ದೇಹ ಸಾಯುತ್ತದೆ. ಮತ್ತು ದೇಹಕ್ಕೆ ಸಾವು ಖಂಡಿತ. ಆದರೆ ಆತ್ಮಕ್ಕೆ ಎಂದಿಗೂ ಸಾವಿಲ್ಲ. ಇದು ಹಿಂದೂ ತತ್ವಶಾಸ್ತ್ರದ ಖಡಾಖಂಡಿತ ತೀರ್ಮಾನ. ಈ ಬಗ್ಗೆ ಚರ್ಚೆಗೆ ಆಸ್ಪದ ಇಲ್ಲದಂತೆ ವಿವರಣೆಗಳನ್ನೂ ಹಿಂದೊ ತತ್ವಶಾಸ್ತ್ರ ಆತ್ಮದ ಬಗ್ಗೆ ನೀಡಿದೆ.

ಈಗ ಮತ್ತೊಮ್ಮೆ 'ಆತ್ಮಹತ್ಯೆ'ಯ ಬಗ್ಗೆ ಮಾತನಾಡೋಣ.

ಯಾರಾದರೂ, ಯಾವುದಾದರೂ ಕಾರಣಕ್ಕೆ ತನ್ನ ಜೀವವನ್ನು ತಾನೇ ಕೊಂದುಕೊಂಡರೆ ನಮ್ಮ ಪತ್ರಕರ್ತರು, ನಮ್ಮ ಲೇಖಕರು 'ಆತ್ಮಹತ್ಯೆ' ಎಂಬ ಪದದಿಂದಲೇ ಬರೆಯುತ್ತಾರೆ. ಆದರೆ ಆತ್ಮ ಎಂಬ ನಿರ್ಗುಣ, ನಿರಾಕಾರ ಅಸ್ತಿತ್ವದ ಬಗ್ಗೆ ನಮಗೆ ತಿಳಿವಳಿಕೆ ಕೊಟ್ಟ ನಮ್ಮ ತತ್ವಶಾಸ್ತ್ರಗಳೇ ಆತ್ಮಕ್ಕೆ ಸಾವಿಲ್ಲ. ಅದು ಅನಾದಿ, ಅನಂತ ಅಂತ ಹೇಳಿರುವಾಗ ಆತ್ಮಹತ್ಯೆ ಎಂಬ ಪದಬಳಕೆ ಎಷ್ಟರ ಮಟ್ಟಿಗೆ ಸರಿ? ಅದು ಆತ್ಮಹತ್ಯೆ ಎಂಬುದರ ಬದಲಾಗಿ 'ಜೀವಹತ್ಯೆ' ಅಥವಾ 'ದೇಹಹತ್ಯೆ' ಎಂದಾಗಬೇಕಲ್ಲವೇ? ಹಾಗಂತ ಆತ್ಮಹತ್ಯೆ ಎಂಬ ಪದಬಳಕೆ ಮಾಡುವವರಿಗೆ ಈ ಸಂಗತಿ ತಿಳಿದಿಲ್ಲ ಅಂತಲ್ಲ. ಆದರೂ ಅದೇನೋ ಕಾರಣದಿಂದ ಆತ್ಮಹತ್ಯೆ ಎಂಬ ಪದಬಳಕೆ ನಮ್ಮಲ್ಲಿ ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ.

ನಾನು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಲು ಇದೇ ಕಾರಣ! ಆತ್ಮಹತ್ಯೆ ಎಂಬ ಪದಬಳಕೆಯ ಬದಲು ದೇಹಹತ್ಯೆ ಅಥವಾ 'ಜೀವಹತ್ಯೆ' ಎಂಬ ಪದವನ್ನು ಬಳಸೋಣ. "ಅಲ್ಲಲ್ಲ, ಅದು ಆತ್ಮಹತ್ಯೆ ಅಂತಲೇ ಬಳಸಬೇಕು. ಆತ್ಮಕ್ಕೆ ಸಾವಿದೆ. ಆತ್ಮವನ್ನು ಹತ್ಯೆಮಾಡಬಹುದು. ದೇಹಹತ್ಯೆ ಅಥವಾ ಜೀವ ಹತ್ಯೆ ಎಂಬ ಪದಬಳಕೆ ತಪ್ಪು" ಎಂದು ವಾದಿಸುವವರು ಖಂಡಿತಾ ಇರಬಹುದು. ಅಂಥವರು ತಮ್ಮ ವಾದವನ್ನು ಸಮರ್ಥವಾಗಿ, ಒಪ್ಪುವಂತೆ ಮುಂದಿಟ್ಟರೆ ಆತ್ಮಹತ್ಯೆಯ ಬಗ್ಗೆ ಒಂದು ಒಳ್ಳೆಯ ಚರ್ಚೆ ನಡೆಯಬಹುದು. ಏನಂತೀರಿ?

ಕಾಮೆಂಟ್‌ಗಳು

ಮೌಲ್ಯ ಜೀವನ್ ಹೇಳಿದ್ದಾರೆ…
nnice it was. what about your book release?
Vinutha Joshi ಹೇಳಿದ್ದಾರೆ…
Modalu bhaya aytu. adare poorthi odidaga tumba vichara tilidukonde.intaha padada balake mattu adannu garige taruvudu eradu tappu.
Joshi ge ega nijvaglu thale kedthu andkonde. ninne s l byrappa avara nirakarana odi mugiside adralli narahari thumba sari e shabdada bagge yochane madodu nodi ega adu nenapaytu.e athmhathye anno shabdada bagge thumba charche agbekagide.
Joshi ge ega nijvaglu thale kedthu andkonde. ninne s l byrappa avara nirakarana odi mugiside adralli narahari thumba sari e shabdada bagge yochane madodu nodi ega adu nenapaytu.e athmhathye anno shabdada bagge thumba charche agbekagide.
Joshi ge ega nijvaglu thale kedthu andkonde. ninne s l byrappa avara nirakarana odi mugiside adralli narahari thumba sari e shabdada bagge yochane madodu nodi ega adu nenapaytu.e athmhathye anno shabdada bagge thumba charche agbekagide.
Unknown ಹೇಳಿದ್ದಾರೆ…
ಓದಿದೆ ತಲೆ ಬಿಸಿಯಾಯಿತು. ನಂತರ ವಿಚಾರ ತಿಳಿದ ಮೇಲೆ ಸಮಾದಾನವಾಯಿತು. ಹೌದು ಆತ್ಮ ಬೇರೆ ಜೀವ ಬೇರೆ. ವ್ಯಕ್ತಿ ಸತ್ತ ನಂತರ ಅವನ ಆತ್ಮ ಬೇರೆಯವರ ದೇಹವನ್ನು ಸೇರಿಕೊಳ್ಳುತ್ತದೆ. ಆದ್ದರಿಂದ ಆತ್ಮಕ್ಕೆ ಸಾವು ಇಲ್ಲ.
Unknown ಹೇಳಿದ್ದಾರೆ…
ಓದಿದೆ ತಲೆ ಬಿಸಿಯಾಯಿತು. ನಂತರ ವಿಚಾರ ತಿಳಿದ ಮೇಲೆ ಸಮಾದಾನವಾಯಿತು. ಹೌದು ಆತ್ಮ ಬೇರೆ ಜೀವ ಬೇರೆ. ವ್ಯಕ್ತಿ ಸತ್ತ ನಂತರ ಅವನ ಆತ್ಮ ಬೇರೆಯವರ ದೇಹವನ್ನು ಸೇರಿಕೊಳ್ಳುತ್ತದೆ. ಆದ್ದರಿಂದ ಆತ್ಮಕ್ಕೆ ಸಾವು ಇಲ್ಲ.
mruganayanee ಹೇಳಿದ್ದಾರೆ…
ಜೋಷಿ ಎಂಥದೋ ಎಷ್ಟು exited ಆಗಿದ್ದೆ ಗೊತ್ತಾ... ಜೋಶಿಗೆ ಹುಚ್ಚು ಹಿಡ್ದಿದೆ ಅಂತ... ಛೆ..
ಯಾವಾಗ್ಲಾದ್ರು ಟೈಮ್ ಆದ್ರೆ Fitzgeraldನ RUBAYAT of OMAR KHAYYAMಓದು ಅದರ ಒಂದು ಸ್ಯಾಂಪಲ್ ನಿಮಗೆ ಆಸಕ್ತಿ ಬರಲಿ ಅಂತ

Dreaming when Dawn's Left Hand was in the Sky
I heard a Voice within the Traven cry,
"Awake my Little ones, and fill the Cup
Before Life's Liquor in its Cup be dry"

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her