ವಿಷಯಕ್ಕೆ ಹೋಗಿ

ಹೀಗೊಂದು ಗುರುವಂದನೆ...

ಬದುಕೊಂದು ಸುಂದರವಾಗಬೇಕಾದರೆ ಎಷ್ಟೆಲ್ಲ ಜನರು ನಮ್ಮ ಮೇಲೆ ಪ್ರಭಾವ ಬೀರುತ್ತಾರಲ್ಲ? ಹೆತ್ತವರು, ಬಂಧುಗಳು, ಸ್ನೇಹಿತರು, ಗುರುಗಳು ಹಾಗೂ ಪರಿಸರ - ಎಲ್ಲರೂ ಒಂದಲ್ಲ ಒಂದು ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾರೆ. ನಮ್ಮ ಭವಿಷ್ಯ ನಮ್ಮ ಕೈಯಲ್ಲೆ ಇರುವುದು ಹೌದಾದರೂ, ಬಹುತೇಕ ಬಾರಿ ನಮ್ಮ ಹಿತೈಷಿಗಳ, ಆಪ್ತರ ಸಣ್ಣ ಪುಟ್ಟ ಸಲಹೆ ಸೂಚನೆ ನಮ್ಮ ಜೀವನಕ್ಕೊಂದು ತಿರುವು ನೀಡುತ್ತದೆ, ಬಾಳು ಬೆಳಗಿಸಲು ಸಹಕರಿಸುತ್ತದೆ.

ನನಗೂ ಹೀಗೇ ಆಯ್ತು. ನಾನು ಎಂಟನೇ ತರಗತಿಯಲ್ಲಿ ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಅಲ್ಲಿನ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಪ್ರಸನ್ನ ಕುಮಾರ ಐತಾಳರು ನನ್ನನ್ನು ತರಗತಿಯ ಆರಂಭದ ದಿನದಲ್ಲಿಯೇ ಕರೆದು ಹೇಳಿದ ಮಾತು ಇಂದಿಗೂ ನನ್ನಲ್ಲಿ ಅಚ್ಚಳಿಯದೇ ನಿಂತಿವೆ. ಹೆಚ್ಚೂ ಕಡಿಮೆ ಯಾವುದೇ ಹುಟ್ಟಾ ಫಟಿಂಗನೂ ಹುಬ್ಬೇರಿಸುವಂತೆ ವರ್ತಿಸುತ್ತಿದ್ದ ನನ್ನನ್ನು ತರಗತಿಯಲ್ಲಿ ನಿಲ್ಲಿಸಿ, "ನಿನಗೇನಾದರೂ ಮನುಷ್ಯನಾಗಬೇಕು ಎಂದಿದ್ದರೆ ಮೊದಲು ಈ ಉಢಾಳತನವನ್ನೆಲ್ಲಾ ಬಿಟ್ಟು ತರಗತಿಯ ಪಾಠಗಳತ್ತ ಹೆಚ್ಚಿನ ಗಮನಕೊಡು. ಅದಕ್ಕಿಂತಲೂ ಹೆಚ್ಚಾಗಿ ಮೊದಲು ಪುಸ್ತಕಗಳನ್ನು ಓದಲು ಆರಂಭಿಸು. ಪುಸ್ತಕಗಳನ್ನು ಓದದ ಮನುಷ್ಯ ಮನುಷ್ಯನೇ ಅಲ್ಲ" ಎಂದು ನನ್ನನ್ನು ಪುಸ್ತಕಗಳತ್ತ ಮುಖಮಾಡಿ ನಿಲ್ಲುವಂತೆ ಮಾಡಿದ್ದು ಐತಾಳರು. ತೇಜಸ್ವಿ, ಭೈರಪ್ಪ ಮುಂತಾದ ಖ್ಯಾತನಮರ ಕೃತಿಗಳನ್ನು ತೋರಿಸಿದ್ದು ಕೂಡಾ ಅವರೇ. ಇವತ್ತು ನಾನು ನನ್ನ ಆಸೆಯಂತೆ ಪತ್ರಿಕೋದ್ಯಮವನ್ನು ಆಯ್ದುಕೊಂಡಿದ್ದರೆ ಅದಕ್ಕೆ ಐತಾಳರು ನನ್ನಲ್ಲಿ ಪುಸ್ತಕಗಳ ಬಗ್ಗೆ ಹುಟ್ಟಿಸಿದ ಕುತೂಹಲವೂ ಕಾರಣ.

ನಂತರ ಕುಂದಾಪುರದ ಭಂಡಾರ್ಕಾರ್ಸ್ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದಾಗಲೂ ನನ್ನ ಅದೃಷ್ಟಕ್ಕೆ ಐತಾಳರೇ ಸಂಸ್ಕೃತ ಅಧ್ಯಾಪಕರಾಗಿ ಬಂದರು. ಸಂಸ್ಕೃತ ಪಾಠದ ಮಧ್ಯೆ ಅವರು ಆಗಾಗ ಹೇಳುತ್ತಿದ್ದ ಹೊಸ ಪುಸ್ತಕಗಳ ವಿಚಾರಗಳು 'ನಾನೂ ಪುಸ್ತಕ ಓದಬೇಕು' ಎಂಬ ಭಾವನೆಯನ್ನು ನನ್ನಲ್ಲಿ ಗಟ್ಟಿಯಾಗಿ ಬಿತ್ತಿದ್ದವು. ಮುಂದಿನ ದಿನಗಳಲ್ಲಿ ಪತ್ರಿಕೆಗಳು ನನ್ನ ಮುಂಜಾನೆಯ ಸಂಗಾತಿಗಳಾದರೆ, ಪುಸ್ತಕಗಳು ಮುಸ್ಸಂಜೆಯ ಜೊತೆಗಾರರಾದವು. ರವಿ ಬೆಳಗೆರೆಯವರ 'ಹಿಮಾಲಯನ್ ಬ್ಲಂಡರ್' ಪುಸ್ತಕವನ್ನು ಓದಲು ಕೊಟ್ಟು ಯುದ್ಧ ಮತ್ತು ಯೋಧರ ಬಗೆಗಿನ ನನ್ನ ತಿಳಿವಳಿಕೆಯನ್ನೇ ಬದಲಾಯಿಸಿದ ಜಾದೂಗಾರರೂ ಅವರೇ.

ಇವತ್ತು ಅವರು ನನಗೆ ಪಾಠಮಾಡುತ್ತಿಲ್ಲದಿರಬಹುದು, ಆದರೆ ಅಂದು ಅವರು ಪುಸ್ತಕಗಳನ್ನು ಎದುರಿಗಿಟ್ಟುಕೊಂಡು ಹೇಳಿದ ಮಾತುಗಳು ಕೊನೆಯವರೆಗೂ ನನ್ನೆದೆಯ ಗೂಡಲ್ಲಿ ಬೆಚ್ಚಗೆ, ಹಚ್ಚ ಹಸಿರಾಗಿ ಇರುತ್ತದೆ.

ಶಾಲಾ ಕಾಲೇಜಿಗೆ ಸೇರಿದ ನಂತರ ನಮ್ಮ ಬಹುತೇಕ ಬೆಳವಣಿಗೆಗಳು ಶಿಕ್ಷಕರ ಮೇಲೆ ಅವಲಂಬಿತವಾಗಿರುತ್ತದೆ. ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಬಗೆ, ಅವರಿಗೆ ಅನನ್ಯ ಜೀವನದೆಡೆಗೆ ದಾರಿತೋರಿಸಬಲ್ಲದು. ಒಂದು ಮಾತಿದೆ 'ಒಬ್ಬ ಸಾಮನ್ಯ ಶಿಕ್ಷಕ ಪಾಠ ಮಾಡುತ್ತಾನೆ, ಉತ್ತಮ ಶಿಕ್ಷಕ ವಿಷಯವನ್ನು ಆಕರ್ಷಕವಾಗಿ ಪ್ರಸ್ತುತಪಡಿಸುತ್ತಾನೆ ಆದರೆ ಒಬ್ಬ ಶ್ರೇಷ್ಠ ಶಿಕ್ಷಕ ವಿದ್ಯಾರ್ಥಿಗಳಿಗೆ ಸ್ಪೂರ್ಥಿಯಾಗುತ್ತಾನೆ.' ಇದೆಷ್ಟು ನಿಜವಲ್ಲವಾ? ಪಾಠ ಮಾಡದೇ ಇದ್ದರೂ ವಿದ್ಯಾರ್ಥಿಗಳಿಗೆ ಸ್ಪೂರ್ಥಿಯಾಗಿ, ಅವರ ಬದುಕಿಗೆ ದೀವಿಗೆಯಾಗುವ ಐತಾಳರಂತಹ ಶಿಕ್ಷಕರು ತರಗತಿಯ ನಾಲ್ಕು ಕೋಣೆಯನ್ನು ಬಿಟ್ಟು ಹೊರಬಂದರೂ, ಬದುಕಿನ ನಾಲ್ಕೂ ದಿಕ್ಕನ್ನು ನೋಡುವಾಗಲೂ ಆದರ್ಶ ಶಿಕ್ಷಕರೆನಿಸುತ್ತಾರೆ.

ಅಂತಹ ಶಿಕ್ಷರಿಗೆ ಗುರುವಂದನೆಯ ರೂಪದ ಬರಹವಿದು.

'ಗರ್ವ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ.

ಓದುಗರಲ್ಲೊಂದು ವಿನಂತಿ:

ಈಗ ತಾನೇ ಪತ್ರಿಕೋದ್ಯಮವನ್ನು ಆಯ್ದುಕೊಂಡು ಬರೆಯುವ ಹೊಸ ಹುರುಪಿನಲ್ಲಿರುವ ನನ್ನ ಸ್ನೇಹಿತರೊಬ್ಬರು ಉತ್ಸಾಹದಿಂದ "ನಿವೇದನೆ" ಎಂಬ ಬ್ಲಾಗೊಂದನ್ನು ಆರಂಭಿಸಿದ್ದಾರೆ. ಅದರ ವಿಳಾಸ ಇಲ್ಲಿದೆ.

http://www.nivedhane.blogspot.com/

ನೀವೊಮ್ಮೆ ಈ ಬ್ಲಾಗಿಗೆ ಭೇಟಿ ನೀಡಿ ನಿಮಗನ್ನಿಸಿದ್ದನ್ನು ಪ್ರತಿಕ್ರಿಯಿಸಿ.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
Hello Mr. Joshi, its good to see you writing the creative articles on this blog spot. The present article is really nice, it shows that teacher is the all time guru in our life and he shows way our life. Anyway all the best for you in future days.
ವಿನಾಯಕ ಭಟ್ಟ ಹೇಳಿದ್ದಾರೆ…
ಬ್ಲಾಗ್ ಚೆನ್ನಾಗಿದೆ. ಅಕ್ಷರ ತಪ್ಪುಗಳು ಕಾಣಿಸಿಕೊಳ್ಳದಂತೆ ಎಚ್ಚರವಿರಲಿ. ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಅದು ಮುಖ್ಯ. ಬರೆಯುವುದನ್ನು ಇನ್ನಷ್ಟು ಆಸಕ್ತಿಕರವಾಗಿ, ವಯಕ್ತಿಕ ವಿಷಯವನ್ನೂ ಸಾರ್ವಜನಿಕರಿಗೆ ಅನ್ವಯವಾಗುವಂತೆ ಬರೆದರೆ ಅದು ಹೆಚ್ಚು ಜನರನ್ನು ತಲುಪಲು ಸಾಧ್ಯ.
ನಿಮ್ಮ ಬರವಣಿಗೆ ಸುಧಾರಿಸಲು ಬ್ಲಾಗು ಸಹಕಾರಿಯಾಗಲಿ...
ಅನಾಮಧೇಯಹೇಳಿದ್ದಾರೆ…
its very nice.doni datida mele ambigana hangyake anno kala edu..hage school, college mugida mele teachers hangyake annorigella nimma artical ondu pathavagli....
ವಿಜಯ್ ಜೋಶಿ ಹೇಳಿದ್ದಾರೆ…
@ಗಣೇಶ್ ಪೈ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.

@ವಿನಾಯಕ ಭಟ್
ನೀವು ಹೇಳಿದ್ದು ಸರಿ. ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ನಾನು ಅಕ್ಷರ ತಪ್ಪುಗಳನ್ನು ಎಸಗಬಾರದು. ಮುಂದೆ ಹಾಗಾಗದಂಟೆ ನೋಡಿಕೊಳ್ಳುತ್ತೇನೆ.

@ಚೈತ್ರಾ ಹೆಗಡೆ
ನಿಮಗೊಂದು ಥ್ಯಾಂಕ್ಸ್. ನನ್ನ ಲೇಖನದ ಉದ್ದೇಶವನ್ನು ಅರ್ಥಮಾಡಿಕೊಂಡಿದ್ದಕ್ಕೆ.
Unknown ಹೇಳಿದ್ದಾರೆ…
ಈ ಲೇಖನವನ್ನು ಗವಱದಲ್ಲಿ ಓದಿದ್ದೇನೆ. ಎರಡು ಬಾರಿ ಓದಿದ್ದೇನೆ. ಚೆನ್ನಾಗಿದೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ