ವಿಷಯಕ್ಕೆ ಹೋಗಿ

ಹೀಗೊಂದು ಅನುಭವ

ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಒಂದು ದಿನ ಕಾಲೇಜು ಬಿಟ್ಟ ನಂತರ ನಮ್ಮ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಬಳಿ ಹೋಗಿದ್ದೆ. ಅದೇ ತಾನೆ ಬರೆದು ಮುಗಿಸಿದ್ದ ಎರಡು ಅಸೈನ್‌ಮೆಂಟುಗಳನ್ನು ಅವರಿಗೆ ತೋರಿಸಬೇಕಾಗಿತ್ತು.
ಅಸೈನ್‌ಮೆಂಟುಗಳನ್ನು ಅವರ ಟೇಬಲ್ಲಿನ ಮೇಲಿಟ್ಟು ವಾಪಸ್ ಬರಬೇಕು ಅನ್ನುವಷ್ಟರಲ್ಲಿ ವಿಭಾಗ ಮುಖ್ಯಸ್ಥರು ನನ್ನನ್ನು ಕರೆದು "ಬೆಂಗಳೂರಿನಿಂದ ಗರ್ವ ಪತ್ರಿಕೆಯ ಪತ್ರಕರ್ತರೊಬ್ಬರು ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಇಲ್ಲಿಗೆ ಬರಲಿಕ್ಕಿದ್ದಾರೆ. ಅವರನ್ನು ಭೇಟಿ ಮಾಡಬೇಕು ಎನ್ನುವಂತಿದ್ದರೆ ಸ್ವಲ್ಪ ಸಮಯ ನಿಲ್ಲಿ. ಅವರ ಜೊತೆ ಮಾತನಾಡಿ ಹೋಗೋಣ" ಎಂದರು. ನಾನು ಆಗ ಗರ್ವ ಪತ್ರಿಕೆಯನ್ನು ಒಂದೂ ಬಿಡದೆ ಓದುತ್ತಿದ್ದೆ. ಹಾಗಾಗಿ ನಿಂತು ಅವರ ಜೊತೆ ಮಾತನಾಡಿ ಹೋಗುವ ಮನಸ್ಸಾಯಿತು.
ಐದೇ ನಿಮಿಷದಲ್ಲಿ ಅವರು ಬಂದರು. ನಮ್ಮ ವಿಭಾಗ ಮುಖ್ಯಸ್ಥರ ಬಳಿ ಸ್ವಲ್ಪ ಹೊತ್ತು ಪತ್ರಿಕೆ-ಸಾಹಿತ್ಯ-ಬರವಣಿಗೆ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದರು. ನಂತರ ನನ್ನ ಹೆಸರು ಕೇಳಿದರು. ತಮ್ಮ ಪರಿಚಯವನ್ನೂ ಮಾಡಿಕೊಂಡರು. ಆದರೆ ಅವರು ಗರ್ವ ಪತ್ರಿಕೆಯವರಲ್ಲ ಎಂದು ನಂತರ ತಿಳಿತು. ತಿಳಿದಾಗ ಸ್ವಲ್ಪ ಬೇಸರವೂ ಆತು!
ಅವರು ತುಂಬ ಓದಿಕೊಂಡಿದ್ದಾರೆ ಎಂಬುದು ಅವರ ಮಾತಿನಿಂದಲೇ ತಿಳಿಯುತ್ತಿತ್ತು. ನನ್ನ ಮತ್ತು ಅವರ ಸಂಬಂಧ ನಂತರದ ದಿನಗಳಲ್ಲಿ ಆತ್ಮೀಯವಾತು. ಅವರು ಕಾರ್ಕಳ, ಉಡುಪಿ, ಕುಂದಾಪುರದಂತಹ ಕರಾವಳಿಯ ಊರುಗಳಿಗೆ ಬಂದಾಗ ಅವರ ಜೊತೆ ಮಾತನಾಡಲೆಂದೇ ಅಲ್ಲಿಗೆ ಹೋಗುತ್ತಿದ್ದೆ.
ಪತ್ರಿಕೋದ್ಯಮ ವಿದ್ಯಾರ್ಥಿಯಾದ ನನಗೆ ಹೈಸ್ಕೂಲಿನ ದಿನಗಳಿಂದಲೂ ಗಾಂಧೀವಾದಿಗಳು, ಸಮಾಜವಾದಿಗಳು, ರಾಷ್ಟ್ರೀಯವಾದಿಗಳು, ಮಹಿಳಾವಾದಿಗಳು ಮುಂತಾದ ವಿಭಿನ್ನ ಸಿದ್ಧಾಂತಗಳ ಹಿನ್ನಲೆಯಿಂದ ಆಲೋಚಿಸುವವರ ಬಗ್ಗೆ ಕುತೂಹಲವಿತ್ತು. ಈ 'ವಾದಿ'ಗಳಲ್ಲಿ ಯಾರು ಶ್ರೇಷ್ಠರು ಎಂಬ ಪ್ರಶ್ನೆಯೂ ನನ್ನಲ್ಲಿತ್ತು. ಹಲವರ ಬಳಿ ಈ ಬಗ್ಗೆ ಕೇಳಿಯೂ ಇದ್ದೆ. ನಾನು ಅಲ್ಲಿಯವರೆಗೆ ಭೇಟಿಯಾದ ಎಲ್ಲರೂ ತಮ್ಮ ವಾದವನ್ನು ಸಮರ್ಥಿಸಿಕೊಂಡು ಇನ್ನೊಬ್ಬರ ವಾದವನ್ನು ಅಲ್ಲಗಳೆದವರೇ ಆಗಿದ್ದರು. ಅದೇ ಪ್ರಶ್ನೆಯನ್ನು ಇವರ ಬಳಿಯೂ ಕೇಳಿದೆ. ಉತ್ತರ ತುಂಬ ಅರ್ಥಗರ್ಬಿತವಾಗಿತ್ತು.
"ನೋಡು, ಇವರಲ್ಲಿ ಯಾರು ಶ್ರೇಷ್ಠರು ಯಾರು ಅಧಮರು ಎಂದು ಯೋಚಿಸುವುದು ಸರಿಯಲ್ಲ. ಇವರೆಲ್ಲರ ಗುರಿಯೂ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದೇ ಆಗಿದೆ. ಇವರೆಲ್ಲರೂ ಕೂಡ ನಮ್ಮ ಸಮಾಜ ಜಾತಿ-ಮತಗಳ ಬಂಧನದಿಂದ ಹೊರಬರಲಿ ಎನ್ನುವವರೇ ಆಗಿದ್ದಾರೆ. ಆದರೆ ಸೈದ್ಧಾಂತಿಕ ಹಿನ್ನಲೆಟ್ಟುಕೊಂಡು ಆಲೋಚನೆ ಮಾಡುವವರಿಗೆ - ಮಾತನಾಡುವವರಿಗೆ ಸಮಾಜದ ಕೆಲವು ಹುಳುಕುಗಳು ಮಾತ್ರ ಗಾಢವಾಗಿ ಕಾಣುತ್ತವೆ. ಇನ್ನು ಕೆಲವು ಹುಳುಕುಗಳು ಅಷ್ಟೊಂದು ಗಾಢವಾಗಿ ಕಾಣಿಸುವುದಿಲ್ಲ. ಉದಾಹರಣೆಗೆ, ಕೆಲವರಿಗೆ ಕಾಶ್ಮೀರ ಸಮಸ್ಯೆ ಪ್ರಮುಖವಾಗಿ ಕಂಡರೆ ಇನ್ನು ಕೆಲವರಿಗೆ ಬಡತನ ಪ್ರಮುಖವಾಗಿ ಕಾಣುತ್ತದೆ. ಆದರೆ ಇವೆರಡೂ ನಮ್ಮ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳೇ ಆಗಿವೆ. ಹಾಗಾಗಿ ಎಲ್ಲರ ವಿಚಾರಗಳನ್ನೂ ಚೆನ್ನಾಗಿ ಓದಿಕೊಂಡು, ಎಲ್ಲ ರೀತಿಯಿಂದಲೂ ಯೋಚಿಸುವುದನ್ನು ಕಲಿತಾಗ ನೀನು ಉತ್ತಮ ಪತ್ರಕರ್ತನಾಗಬಲ್ಲೆ" ಎಂದರು.
ಅಲ್ಲಿಯವರೆಗೂ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ ಇನ್ನೊಬ್ಬರನ್ನು ತೆಗಳುವುದರಲ್ಲೇ ಕಾಲಹರಣ ಮಾಡುವ ಅನೇಕರನ್ನು ಕಂಡಿದ್ದ ನನಗೆ ಇವರ ಮಾತುಗಳು ಹೊಸ ಆಲೋಚನೆಯನ್ನು ನೀಡಿದವು. ಅವತ್ತಿನಿಂದ ನಾನು ಎಲ್ಲ ಬಗೆಯ ವಿಚಾರಗಳ ಪುಸ್ತಕಗಳನ್ನೂ ಓದಲು ಆರಂಭಿಸಿದ್ದೇನೆ. ಒಮ್ಮೆ ಲೋಹಿಯಾರ ಜೀವನಚರಿತ್ರೆಯನ್ನು ಓದಿದರೆ ಇನ್ನೊಮ್ಮೆ ಗುರೂಜಿಯವರದ್ದು. ಮತ್ತೊಮ್ಮೆ ಗಾಂಧೀಜಿಯವರದ್ದು. ಒಟ್ಟಿನಲ್ಲಿ ಕೆಲವು ಸಿದ್ಧಾಂತವಾದಿಗಳಿಗಿರುವ 'ಪುಸ್ತಕ ಮೈಲಿಗೆ'ಯನ್ನು ಸಾಧ್ಯವಾದಷ್ಟರ ಮಟ್ಟಿಗೆ ಬಿಡಲು ಪ್ರಾರಂಭಿಸಿದ್ದೇನೆ.
ಅಂದಹಾಗೆ ಲೇಖನದುದ್ದಕ್ಕೂ 'ಅವರು' 'ಇವರು' ಅಂತಲೇ ಸಂಬೋಧಿಸಿರುವ ಅವರು ಯಾರು ಅಂತ ಕೇಳಬೇಡಿ. ನನಗೂ ಆ ಬಗ್ಗೆ ಗೊಂದಲಗಳು ಪ್ರಾರಂಭವಾಗಿ ಬಿಟ್ಟಿವೆ. ಗುರುಗಳು ಅಂತ ಕರೆಯೋಣವೆಂದರೆ ಅವರು ಗುರುಗಳಿಗಿಂತ ಆತ್ಮೀಯರಾಗಿಬಿಟ್ಟಿದ್ದಾರೆ. ಸ್ನೇಹಿತ ಅಂತ ಕರೆಯೋಣವೆಂದರೆ ಸ್ನೇಹಿತರಂತೆ ನನ್ನನ್ನು ಅವರು ಗದರಿಸಿಲ್ಲ. ಹಾಗಾಗಿ ಅವರು ಯಾರು ಎನ್ನುವುದು ಇಲ್ಲಿ ಬೇಡ. ಆದರೆ ಅವರ ವಿಚಾರಗಳು ನನ್ನಂಥ ಸಾಮಾನ್ಯ ವಿದ್ಯಾರ್ಥಿಗಳಿಗೆ ಸರಿಯಾಗಿ ಅರ್ಥವಾದರೆ ಸಾಕು.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
Who is this "AVARU"?
ಚಿತ್ರಾ ಸಂತೋಷ್ ಹೇಳಿದ್ದಾರೆ…
ಬ್ಲಾಗ್ ಚೆನ್ನಾಗಿದೆ..ಆದ್ರೂ 'ಅವರ'ಹೆಸರನ್ನು ಪ್ರಸ್ತಾಪಿಸಿದ್ದರೆ ಚೆನ್ನಾಗಿತ್ತು..ಇವತ್ತು ಮೊದಲ ಬಾರಿಗೆ ನಿಮ್ ಬ್ಲಾಗ್ ನೋಡಿದ್ದು. ಇನ್ನಷ್ಟು ಬರೆಯಿರಿ..ತಾತ್ವಿಕತೆ ಜೊತೆಗೆ ಕ್ರಿಯಾಶೀಲತೆನೂ ಇರಲಿ. ನನ್ ಬ್ಲಾಗ್ ಗೆ ಬಂದಿದ್ದಕ್ಕೆ ಕೃತಜ್ಞತೆಗಳು....
ಚಿತ್ರಾ
Annapoorna Daithota ಹೇಳಿದ್ದಾರೆ…
Lekhana utthamavaagide. `Avaru' heliddu noorakke nooru sathya.
Sree ಹೇಳಿದ್ದಾರೆ…
nice to read that there are people like you who look into and beyond 'ism's. it is heartening to see open mindedness at such young age! keep it up! blog nalli bEre barahagaLU chennaagi bartive.
ಅನಾಮಧೇಯಹೇಳಿದ್ದಾರೆ…
Nice Article VIRAT.
In a non-commercial TV ad, they say Use CONDOME for safe SEX. What's meant by this????
And that ad is being published by Government authorities in public interest..!!
SO they are encouraging mens to go to prostitutes..??????
OR Y a man should use CONDOME with his own wife..????

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ