ವಿಷಯಕ್ಕೆ ಹೋಗಿ

"ಮತಾಂತರ - ಭಯೋತ್ಪಾದನೆ – ಕೋಮುವಾದ"

(ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಡಿಸೆಂಬರ್ ೨೮, ೨೦೦೮ರಂದು ’ಜೈಕನ್ನಡಮ್ಮ’ ವಾರಪತ್ರಿಕೆಯ ದಶಮಾನೋತ್ಸವ ಸಮಾರಂಭ ನಡೆಯಿತು. ಅಂದು ’ಭಯೋತ್ಪಾದನೆ, ಮತಾಂತರ ಮತ್ತು ಕೋಮುವಾದ’ ವಿಷಯದ ಬಗ್ಗೆ ನಾನು ಮಂಡಿಸಿದ ವಿಚಾರಗಳು.)

ಸಭಾಧ್ಯಕ್ಷರೆ, ವೇದಿಕೆಯಲ್ಲಿರುವ ಸಂಪನ್ಮೂಲ ವ್ಯಕ್ತಿಗಳೇ ಹಾಗೂ ನೆರೆದಿರುವ ಎಲ್ಲ ಸಹೃದಯರೆ,

ಇಂದು ನನಗೆ ಪೂರಕ ಮಾಹಿತಿಗಳನ್ನಾಡಲು ಸೂಚಿಸಿರುವ ವಿಷಯ ಭಯೋತ್ಪಾದನೆ - ಕೋಮುವಾದ - ಮತಾಂತರ. ಬಹುಷಃ ಈ ಮೂರು ವಿಚಾರಗಳು ನಮ್ಮ ದೇಶವನ್ನು ತೀವ್ರವಾಗಿ ಕಾಡುತ್ತಿರುವ ಸಮಸ್ಯೆಗಳು ಅನ್ನುವುದನ್ನು ಎಲ್ಲರೂ - ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ - ಒಪ್ಪುತ್ತಾರೆ ಎಂದು ನಂಬಿದ್ದೇನೆ. ಹಾಗಾಗಿ ಈ ವಿಚಾರಗಳ ಬಗ್ಗೆ ಲಘುವಾಗಿ ಮಾತನಾಡುವುದು ಸಾಧ್ಯವಾಗದು. ಆದರೂ ನನಗೆ ನೀಡಿರುವ ಸಮಯದ ಪರಿಮಿತಿಯಲ್ಲಿ ಈ ವಿಚಾರಗಳ ಬಗ್ಗೆ ನನ್ನ ಅಭಿಪ್ರಾಯವನ್ನು ಮಂಡಿಸುವ ಪ್ರಯತ್ನ ಮಾಡುತ್ತೇನೆ.

ಭಯೋತ್ಪಾದನೆ ಎಂಬ ಪದದ ಅರ್ಥ ಮೇಲ್ನೋಟಕ್ಕೆ ಬಹಳ ಸರಳವಾಗಿದೆ. ಭಯದ ಉತ್ಪಾದನೆ, ಯಾರು ಇನ್ನೊಬ್ಬರ ಮನಸ್ಸಿನಲ್ಲಿ ತನ್ನ ಕೃತ್ಯಗಳಿಂದ ಭೀತಿಯನ್ನು ಮೂಡಿಸುತ್ತಾನೋ ಅವನನ್ನು ಭಯೋತ್ಪಾದಕ ಅನ್ನಬಹುದು ಹಾಗೂ ಆ ಪ್ರಕ್ರಿಯೆಯನ್ನು ಭಯೋತ್ಪಾದನೆ ಎಂದು ಕರೆಯಬಹುದು. ಇದರರ್ಥ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್ ಭಾರತೀಯರ ಪಾಲಿಗೆ ಭಯೋತ್ಪಾದಕನಾದರೆ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಪಾಲಿಗೆ ಭಯೋತ್ಪಾದಕರಾಗಿ ಕಾಣಬಹುದು! ಜಗತ್ತಿನ ಪಾಲಿಗೆ ಪರಮ ಕ್ರೂರಿಯಾಗಿರುವ, ನಂ. ೧ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅಲ್-ಖೈದಾ ಕಾರ್ಯಕರ್ತರ ಪಾಲಿಗೆ ಆರಾಧ್ಯ ದೈವದಂತೆ ಕಾಣಬಹುದು! ಆದರೆ ಸಮಕಾಲೀನ ಜಗತ್ತಿನಲ್ಲಿ ಕಂಡುಬರುತ್ತಿರುವ ಭಯೋತ್ಪಾದಕ ಚಟುವಟಿಕೆಗಳನ್ನು ಇಷ್ಟು ಸರಳವಾಗಿ ವಿವರಿಸಲು ಸಾಧ್ಯವಿಲ್ಲ.

ಸಮಕಾಲೀನ ಜಗತ್ತಿನಲ್ಲಿ ಭಯೋತ್ಪಾದನೆಯನ್ನು ಇಸ್ಲಾಮಿನ ಜೊತೆಗೆ ಸಮೀಕರಿಸಲಾಗುತ್ತಿದೆ. ಈ ಸಮೀಕರಣವನ್ನು ಕೇವಲ ಒಬ್ಬ ಭಾರತೀಯ ಬಲಪಂಥೀಯ ಮಾತ್ರ ಮಾಡುತ್ತಿಲ್ಲ. ಬದಲಿಗೆ ಇಡೀ ವಿಶ್ವ ಇವತ್ತು ಭಯೋತ್ಪಾದನೆಯನ್ನು ಇಸ್ಲಾಮಿನ ಜತೆಗೆ ಸಮೀಕರಿಸುತ್ತಿದೆ. ಇವತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳಲ್ಲಿ ಶಂಕಿತರು ಮತ್ತು ತಪ್ಪಿತಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರೇ ಆಗಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ನಾವು ಭಯೋತ್ಪಾದನೆಯನ್ನು ಕೇವಲ ಧಾರ್ಮಿಕ ಚೌಕಟ್ಟಿನಿಂದ ಮಾತ್ರ ನೋಡಬಾರದು. ಬದಲಿಗೆ ಭಯೋತ್ಪಾದನೆಯನ್ನು ಪ್ರತ್ಯೇಕಿಸಿ ನೋಡಬೇಕು.
ನನ್ನ ಪ್ರಕಾರ ನಾಲ್ಕು ಬಗೆಯ ಭಯೋತ್ಪಾದನೆಗಳನ್ನು ನಾವು ಗಮನಿಸಬಹುದು:

೧. ಧಾರ್ಮಿಕ ಭಯೋತ್ಪಾದನೆ:- ಯಾವುದೇ ಧರ್ಮ ಅಥವಾ ಮತದ ಅನುಯಾಯಿ ತನ್ನ ಧರ್ಮ, ಮತ ಅಥವಾ ದೇವರೇ ಶ್ರೇಷ್ಠ, ಇನ್ನೊಬ್ಬರದು ನಿಕೃಷ್ಟ ಎಂದು ನಂಬಲು ಆರಂಭಿಸಿದರೆ ಆತ ಧಾರ್ಮಿಕ ಅಥವಾ ಮತೀಯ ಮೂಲಭೂತವಾದಿಯಾಗುತ್ತಾನೆ. ಮತೀಯ ಮೂಲಭೂತವಾದ ಭಯೋತ್ಪಾದನೆಗೆ ಮೂಲವಾಗುತ್ತದೆ. ಇವತ್ತಿನ ಇಸ್ಲಾಮಿಕ್ ಮೂಲಭೂತವಾದಿಗಳ ಸಮಸ್ಯೆಯೂ ಇಲ್ಲೇ ಇದೆ.

೨. ರಾಜಕೀಯ ಭಯೋತ್ಪಾದನೆ

೩. ಸೈದ್ಧಾಂತಿಕ ಭಯೋತ್ಪಾದನೆ:- ರಾಜಕೀಯ ಮತ್ತು ಸೈದ್ಧಾಂತಿಕ ಭಯೋತ್ಪಾದನೆಗಳು ಒಂದಕ್ಕೊಂದು ಬೆಸೆದುಕೊಂಡಿರುವಂಥವುಗಳು. ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದು ಅಂತ ಒಂದು ಸಿದ್ಧಾಂತವಿರುತ್ತದೆ (ಹೇಳಿಕೊಳ್ಳಲಿಕ್ಕೆ ಮಾತ್ರ, ಆಚರಣೆಗಲ್ಲ!). ಆ ಸಿದ್ಧಾಂತವೆಂಬ ಹಣೆಪಟ್ಟಿ ಕೆಲವೊಮ್ಮೆ ಅಧಿಕಾರದ ಮದದಲ್ಲಿ ಹಣೆಯಿಂದ ಜಾರಿ ಕಣ್ಣಿಗೆ ಬರುತ್ತದೆ. ಆಗ ಅವನಿಗೆ ಜಗತ್ತು ಕಾಣದಾಗುತ್ತದೆ. ತನಗೆದುರಾದವನನ್ನು ನಿರ್ದಯವಾಗಿ ಹತ್ತಿಕ್ಕಲು ಅನುವಾಗುವ ಆತ ರಾಜಕೀಯ ಭಯೋತ್ಪಾದಕನಾಗುತ್ತಾನೆ. ಸೈದ್ಧಾಂತಿಕ ಭಯೋತ್ಪಾದನೆಯೂ ಇದೇ ರೀತಿಯದ್ದು.

ತನ್ನ ಸಿದ್ಧಾಂತವನ್ನು ಬೆಂಬಲಿಸುವ ಅಥವಾ ಅನುಮೋದಿಸುವ ಸರಕಾರ ಆಡಳಿತದಲ್ಲಿ ಇದೆ ಎಂದಾಗ - ಕೆಲವು ಸಂದರ್ಭಗಳಲ್ಲಿ - ಆ ಸಿದ್ಧಾಂತದ ಬೆಂಬಲಿಗರ ಹಣೆಪಟ್ಟಿ ಕಣ್ಣಿನ ಪಟ್ಟಿಯಾಗುತ್ತದೆ. ಆಗ ಅವಿವೇಕಗಳು ಸಂಭವಿಸುತ್ತವೆ.

೪. ಆರ್ಥಿಕ ಭಯೋತ್ಪಾದನೆ:- ಇದು ಜಗತ್ತಿನ ಮುಂದುವರೆದ ರಾಷ್ಟ್ರಗಳು ತೃತೀಯ ಜಗತ್ತಿನ ರಾಷ್ಟ್ರಗಳ ಮೇಲೆ ನಡೆಸುತ್ತಿರುವ ಆರ್ಥಿಕ ಶೋಷಣೆಗೆ ನಾನಿಟ್ಟಿರುವ ಹೆಸರು. ಇದಕ್ಕೆ ಕಾರಣಗಳನ್ನು ಮತ್ತು ಇದರ ಪರಿಣಾಮಗಳನ್ನು ನನಗೆ ನೀಡಿರುವ ಅವಧಿಯಲ್ಲಿ ಚರ್ಚಿಸಲು ಸಾಧ್ಯವಿಲ್ಲ.

ಎಲ್ಲ ರೀತಿಯ ಭಯೋತ್ಪಾದನೆಗಳಿಗೂ ಮೂಲಭೂತವಾದವೇ ಕಾರಣ. ಹಾಗಾಗಿ ಮೂಲಭೂತವಾದವನ್ನು ಚಿವುಟಿಹಾಕಿದರೆ ಭಯೋತ್ಪಾದನೆಯೆಂಬುದು ತನ್ನಿಂತಾನೆ ಇಲ್ಲವಾಗುತ್ತದೆ.

ಇನ್ನು ಮತಾಂತರದ ವಿಚಾರಕ್ಕೆ ಬರೋಣ.

ಭಾರತದ ಪಾಲಿಗೆ ಮತಾಂತರ ಎಂಬುದು ಹೊಸ ಸಂಗತಿಯಲ್ಲ. ಸೆಮೆಟಿಕ್ ಮತಗಳ ಆಗಮನದ ಜತೆಜತೆಗೇ ಭಾರತದಲ್ಲಿ ಮತಾಂತರ ಆರಂಭವಾಯಿತು. ಆಗ ಕೂಡ - ಈಗಿನಂತೆಯೇ - ಒತ್ತಾಯದ, ಆಮಿಷದ, ಮನಃಪೂರ್ವಕವಾದ ಮತಾಂತರಗಳು ಜಾರಿಯಲ್ಲಿದ್ದವು. ಆದರೆ ಇಂದು ಮತಾಂತರವೆಂಬುದು ರಾಜಕೀಯ ಆಯಾಮವನ್ನು ಪಡೆದುಕೊಂದಿದೆ. ಹಾಗಾಗಿ ಅದು ದೊಡ್ಡ ಪ್ರಮಾಣದ ಗಮನವನ್ನು ಪಡೆದುಕೊಳ್ಳುತ್ತಿದೆ.

ಮತಾಂತರವನ್ನು ವರ್ಗೀಕರಿಸಿ ನೋಡಬೇಕಾಗಿರುವುದು ನಮ್ಮ ಕಾಲದ ಅಗತ್ಯತೆಗಳಲ್ಲಿ ಒಂದು.

೧. ಆಮಿಷದ ಮತಾಂತರ:- ಕ್ರಿಶ್ಚಿಯನ್ ಮಿಶನರಿಗಳು ಆಮಿಷದ ಮತಾಂತರದಲ್ಲಿ ತೊಡಗಿರುವ ಬಗ್ಗೆ ಸಾಕಷ್ಟು ಆರೋಪಗಳಿವೆ. ಅವು ನಿರಾಧಾರವೇನೂ ಅಲ್ಲ.

ಜಗತ್ತಿನ ಪಾಪವನ್ನು ತೊಳೆಯುವುದಕ್ಕಾಗಿ ಏಸುವು ಭೂಮಿಯ ಮೇಲೆ ಜನ್ಮತಾಳಿದನು ಎಂದು ಕ್ರಿಶ್ಚಿಯನ್ ಮಿಶನರಿಗಳು ವ್ಯಾಪಕ ಪ್ರಚಾರ ಮಾಡುತ್ತಾರೆ. ಅಂದರೆ ಏಸುವಿನ ಜನನದಿಂದಾಗಿ ಭೂಮಿಯ ಮೇಲಿನ ಜನರ ಪಾಪವೆಲ್ಲ ತೊಳೆದುಹೋಯಿತು. ಆದರೆ ಮತಾಂತರ ಕೈಗೊಳ್ಳುವಾಗ ನಿಮ್ಮ ಪಾಪಗಳನ್ನು ತೊಳೆದುಕೊಳ್ಳಲು ಏಸುವನ್ನು ನಂಬುವುದೊಂದೇ ದಾರಿ ಎಂದು ಹೇಳುತ್ತಾರೆ. ಅವರ ವಾದದಲ್ಲಿ ಇರುವ ದ್ವಂದ್ವವನ್ನು ಅರ್ಥಮಾಡಿಕೊಂಡರೆ ಕ್ರಿಶ್ಚಿಯನ್ ಮಿಶನರಿಗಳ ಮತಾಂತರದ ವಿಧಾನ ಎಷ್ಟು ಜೊಳ್ಳು ಎನ್ನುವುದು ಅರ್ಥವಾಗುತ್ತದೆ.

೨. ಬಲಾತ್ಕಾರದ ಮತಾಂತರ:- ಹಿಂದೆ ಮುಸ್ಲಿಂ ರಾಜರುಗಳು ಇಂತಹ ರೀತಿಯಲ್ಲಿ ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ ಹೇರಳ ಉದಾಹರಣೆಗಳು ಇತಿಹಾಸದುದ್ದಕ್ಕೂ ನಮಗೆ ಕಂಡುಬರುತ್ತವೆ. ಕ್ರೈಸ್ತ ಮತಪ್ರಚಾರಕರು ಕೂಡ ಗೋವಾ, ಕೊಂಕಣ ತೀರ ಪ್ರದೇಶಗಳಲ್ಲಿ ಬಲಾತ್ಕಾರದ ಮೂಲಕವೇ ಜನರನ್ನು ಮತಾಂತರಿಸಿದರು. ಮತಾಂತರದಲ್ಲಿ ಅತ್ಯಂತ ಹೇಯ ಮತ್ತು ಅಕ್ಷಮ್ಯ ವಿಧಾನ ಇದು.

೩. ಮನಃಪೂರ್ವಕ ಮತಾಂತರ:- ಒಂದು ಮತವನ್ನು ಆಳವಾಗಿ ಅಧ್ಯಯನ ಮಾಡಿ, ಅದರಲ್ಲಿನ ಒಳಿತು ಕೆಡುಕುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಸ್ವ-ಇಚ್ಛೆಯಿಂದ ಒಂದು ಮತದಿಂದ ಇನ್ನೊಂದು ಮತಕ್ಕೆ ಪರಿವರ್ತನೆಗೊಳ್ಳುವುದು. ಇದು ವ್ಯಕ್ತಿಸ್ವಾತಂತ್ರ್ಯವನ್ನು ಗೌರವಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿಕೊಳ್ಳಬೇಕಾಗುತ್ತದೆ.

೪. ಪ್ರತಿಭಟನೆಯ ಅಸ್ತ್ರವಾಗಿ ಮತಾಂತರ:- ನೀವು ಅಗಾಗ ಪತ್ರಿಕೆಗಳಲ್ಲಿ ಓದುತ್ತಿರುತ್ತೀರಿ. ಸಾವಿರಾರು ಮಂದಿ ದಲಿತರು ಬೌದ್ಧ ಮತಕ್ಕೆ ಮತಾಂತರಗೊಂಡ ಸುದ್ದಿಗಳು ಆಗಾಗ್ಗೆ ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತವೆ. ಇದು ಹಿಂದೂ ಸಮಾಜಕ್ಕೆ ಶಾಪದಂತೆ ಅಂಟಿಕೊಂಡಿರುವ ಜಾತಿ ಪದ್ಧತಿಯೆಂಬ ಬೌದ್ಧಿಕ ದಾರಿದ್ರ್ಯವನ್ನು ವಿರೋಧಿಸಿ ನಡೆಯುವ ಪ್ರಕ್ರಿಯೆ. ಮತಾಂತರವಾಗುವ ಎಲ್ಲ ದಲಿತರಿಗೂ ಬೌದ್ಧ ಮತದ ಬೋಧನೆಗಳ ಪೂರ್ಣ ಪ್ರಮಾಣದ ಅರಿವಿಲ್ಲದಿರಬಹುದು. ಆದರೆ ಹಿಂದೂ ಧರ್ಮೀಯರು ತೋರಿದ ಅನಾದರವನ್ನು ಪ್ರತಿಭಟಿಸಿ ದಲಿತರು ಅನ್ಯ ಮತಕ್ಕೆ ಮತಾಂತರಗೊಂಡರೆ ಅದನ್ನು ತಡೆಯುವ ನೈತಿಕ ಸ್ಥೈರ್ಯ ಯಾರಿಗಿದೆ?

ಎಲ್ಲ ಧರ್ಮಗಳೂ ಬೋಧಿಸುವುದು ಒಂದೇ ಎಂಬುದನ್ನು ನಾನು ಒಪ್ಪುವುದಿಲ್ಲ. ಎಲ್ಲ ಧರ್ಮಗಳೂ ಕೇವಲ ಶಾಂತಿಯನ್ನೇ ಬೋಧಿಸಿದ್ದರೆ ಜಗತ್ತಿನಲ್ಲಿ ಜಿಹಾದ್ ಇರುತ್ತಿರಲಿಲ್ಲ, ಕ್ರುಸೇಡ್ ಕೂಡ ಸಂಭವಿಸುತ್ತಿರಲಿಲ್ಲ. ಹಾಗೆ ನೋಡಿದರೆ ಪ್ರತಿಯೊಂದು ಧರ್ಮದಲ್ಲಿಯೂ ಅದರದೇ ಆದ ಶಕ್ತಿ-ದೌರ್ಬಲ್ಯಗಳು ಇವೆ.

ಅನ್ಯ ಧರ್ಮಗಳನ್ನು ಒಪ್ಪುವುದು ಬಿಡುವುದು ವ್ಯಕ್ತಿಗತ ವಿಚಾರ. ಆದರೆ ಅನ್ಯಮತಗಳನ್ನು ಗೌರವಿಸುವುದು ಜಾಗತಿಕ ಶಾಂತಿಗೆ ಅನಿವಾರ್ಯ. ಯಾವ ಧರ್ಮ ಶ್ರೇಷ್ಠ, ಯಾವುದು ಅಲ್ಲ ಎಂಬ ಕೊನೆಯಿರದ ಚರ್ಚೆ ನಡೆಸಿ ಸಮಯ ಹಾಳು ಮಾಡುವುದಕ್ಕಿಂತ ಪರಧರ್ಮಗಳೆಡೆ ಗೌರವ ಬೆಳೆಸಿಕೊಳ್ಳುವುದು ಒಳ್ಳೆಯದು. maatanaadalu

ಅವಕಾಶ ಕೊಟ್ಟ ಎಲ್ಲರಿಗೂ ಧನ್ಯವಾದಳು.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
vichaaravannu thumbaa chennagi manDisiddeera...
udaaharaNegaLu iddiddre vishayada manDane innaShTu pariNaamakaari aagtitu annOdu nanna abhipraaya
Unknown ಹೇಳಿದ್ದಾರೆ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದ ’ಭಯೋತ್ಪಾದನೆ, ಮತಾಂತರ ಮತ್ತು ಕೋಮುವಾದ’ ವಿಷಯದ ಬಗ್ಗೆ ತಿಳಿದುಕೊಳ್ಳಲು ಇಷ್ಟು ದಿನ ಬೇಕಾಯಿತು. ವಿಚಾರಗಳು ಬಹಳ ಚೆನ್ನಾಗಿ ಮಂಡನೆಯಾಗಿದೆ.
ಅನಾಮಧೇಯಹೇಳಿದ್ದಾರೆ…
nice!!

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ