ವಿಷಯಕ್ಕೆ ಹೋಗಿ

ಆಕೆಯನ್ನು ಏನಂತ ಕರೆಯಲಿ?

ಒಂದಾನೊಂದು ಕಾಲದಲ್ಲಿ ಇನ್ನೂ ಜನಿಸಿಲ್ಲದ ಆದರೆ ಇನ್ನೊಂದೆರಡು ದಿನಗಳಲ್ಲಿ ಜನಿಸಲಿಕ್ಕಿರುವ ಮಗುವೊಂದಿತ್ತು. ಆ ಮಗು ದೇವರನ್ನೊಮ್ಮೆ ಪ್ರಶ್ನಿಸಿತು. "ದೇವರೇ, ನೀನು ನನ್ನನ್ನು ನಾಳೆ ಭೂಮಿಗೆ ಕಳಿಸುತ್ತೀಯಾ ಎಂದು ಇಲ್ಲಿ (ಸ್ವರ್ಗ) ಇರುವವರೆಲ್ಲಾ ಮಾತಾಡಿಕೊಳ್ಳುತ್ತಿದ್ದಾರೆ. ನಾನು ಇನ್ನೂ ತುಂಬಾ ಚಿಕ್ಕವ. ಅದಕ್ಕಿಂತಲೂ ಹೆಚ್ಚಾಗಿ ನಾನೊಬ್ಬ ನಿಸ್ಸಹಾಯಕ ಮಗು. ಹೀಗಿರುವಾಗ ನಾನು ಇಲ್ಲಿಂದ ಭೂಮಿಗೆ ಹೋಗಿ ಹೇಗೆ ಜೀವಿಸಲಿ?"

ದೇವರು ಪ್ರೀತಿಯಿಂದ "ಮಗೂ, ಭೂಮಿಯ ಮೇಲೆ ತುಂಬಾ ದೇವತೆಗಳಿದ್ದಾರೆ. ಅವರಲ್ಲಿ ಒಬ್ಬಳನ್ನು ನಾನು ನಿನಗಾಗಿ ಆರಿಸಿಟ್ಟಿದ್ದೇನೆ. ಅವಳು ನಿನಗಾಗಿ ಕಾಯುತ್ತಿರುತ್ತಾಳೆ. ಅವಳೇ ನಿನ್ನ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ" ಎಂದ.
"ಆದರೆ ನಾನಿಲ್ಲಿಯೇ ತುಂಬಾ ಸಂತೋಷದಿಂದಿದ್ದೇನೆ. ನಾನಿಲ್ಲಿ ನನ್ನಷ್ಟಕ್ಕೇ ಹಾಡಿಕೊಂಡು, ನಗಾಡಿಕೊಂಡು ಸಂತೋಷಪಡುತ್ತಿದ್ದೇನೆ. ನನಗೆ ಖುಷಿಯಿಂದಿರಲಿಕ್ಕೆ ಇಷ್ಟು ಸಾಕು. ನಾನು ಭೂಮಿಗೆ ಹೋದರೆ ಇವೆಲ್ಲವನ್ನೂ ಕಳೆದುಕೊಳ್ಳಬೇಕಾಗುವುದಿಲ್ಲವೇ?" ಎಂದಿತು ಮಗು.

"ನಿನ್ನ ಪಾಲಿನ ದೇವತೆ ನಿನಗಾಗಿ ದಿನಾ ಹಾಡುತ್ತಾಳೆ. ಅದಕ್ಕಿಂತ ಹೆಚ್ಚಾಗಿ ಅವಳು ನಿಷ್ಕಾಮ ಪ್ರೇಮವನ್ನು ನೀಡುತ್ತಾಳೆ. ಅವಳ ಪ್ರೀತಿಯನ್ನು ಅನುಭವಿಸುತ್ತಾ ನೀನು ಸುಖವಾಗಿರಬಹುದಲ್ಲವೇ?"

"ಅದು ಸರಿ. ಆದರೆ ಭೂಮಿಯಲ್ಲಿರುವ ಮನುಷ್ಯರು ನನ್ನ ಜೊತೆ ಮಾತನಾಡಲು ಬಂದರೆ ಅವರ ಭಾಷೆಯನ್ನು ನಾನು ಹೇಗೆ ಅರ್ಥಮಾಡಿಕೊಳ್ಳಲಿ? ನನಗೆ ಇಲ್ಲಿ ನಿನ್ನ ಜೊತೆ ಮಾತನಾಡಿದ ಅನುಭವ ಬಿಟ್ಟರೆ ಮನುಷ್ಯರ ಜೊತೆ ಮಾತನಾಡಿ ಗೊತ್ತಿಲ್ಲ" ಮತ್ತೆ ಪ್ರಶ್ನಿಸಿತು ಮಗು.

ಮಗುವಿನ ಮುಗ್ಧತೆ, ಸ್ನಿಗ್ಧ ಸೌಂದರ್ಯ ಕಂಡು ದೇವರಿಗೂ ಮರುಕ ಬಂತು. "ಮಗೂ ನಿನ್ನ ಪಾಲಿನ ದೇವತೆಗೆ ತುಂಬಾ ಸಹನೆಯಿದೆ. ಅವಳು ಜಗತ್ತಿನಲ್ಲೆಲ್ಲೂ ಕೇಳಲಾರದಷ್ಟು ಸುಂದರವಾದ, ಸಿಹಿಯಾದ ಮಾತನ್ನು ನಿನಗೆ ಕಲಿಸುತ್ತಾಳೆ. ಅಷ್ಟು ಅದ್ಭುತವಾದ ಮಾತನ್ನು ನೀನು ಸ್ವರ್ಗದಲ್ಲಿಯೂ ಕೇಳಲು ಸಾಧ್ಯವಿಲ್ಲ. ಅವಳು ನಿನಗೆ ಬೇರೆಯವರ ಜೊತೆ ಮಾತನಾಡುವುದು ಹೇಗೆ ಅಂತ ಕಲಿಸುತ್ತಾಳೆ."

ಆದರೂ ಮಗುವಿಗೆ ಸಮಾಧಾನವಾಗಲಿಲ್ಲ. "ಮನುಷ್ಯರ ಬಳಿಯೇನೋ ಮಾತನಾಡಬಹುದು. ಆದರೆ ನಿನ್ನ ಜೊತೆ ಮಾತನಾಡಬೇಕು ಅಂತ ಅನಿಸಿದಾಗ ಏನು ಮಾಡಲಿ?" ಎಂದು ಪ್ರಶ್ನಿಸಿತು.

ದೇವರು ಮುಗುಳ್ನಕ್ಕ. "ನಿನ್ನ ದೇವತೆ ನಿನ್ನ ಕೈ ಜೋಡಿಸಿ ನನಗಾಗಿ ಪ್ರಾರ್ಥಿಸುವುದು ಹೇಗೆ ಎಂಬುದನ್ನೂ ಹೇಳಿಕೊಡುತ್ತಾಳೆ. ಪ್ರಾರ್ಥನೆಯ ಮೂಲಕ ನೀನು ನನ್ನ ಜೊತೆ ಮಾತನಾಡಬಹುದು."

"ಭೂಮಿಯ ಮೇಲೆ ತುಂಬಾ ಕೆಟ್ಟ ಮನುಷ್ಯರು ಇದ್ದಾರೆ ಅಂತ ಕೇಳಿದ್ದೇನೆ. ಅಲ್ಲಿ ನನ್ನನ್ನು ಯಾರು ರಕ್ಷಿಸುತ್ತಾರೆ? ಇಲ್ಲಿ ನೀನಿದ್ದೀಯಾ? ಅಲ್ಲಿ ಯಾರಿದ್ದಾರೆ?" ಮಗು ಮತ್ತೆ ತನ್ನ ಮುಗ್ಧ ಪ್ರಶ್ನೆಯಿಟ್ಟಿತು.

ದೇವರು ಮಗುವಿನ ಹತ್ತಿರಕ್ಕೆ ಬಂದ. ನಿಧಾನವಾಗಿ ಮಗುವನ್ನು ಅಪ್ಪಿಕೊಂಡ. ಎಂತಹ ಅಸಹಾಯಕನ ಎದೆಯಲ್ಲೂ ಅಶಾಕಿರಣವನ್ನು ಹೊತ್ತಿಸಬಲ್ಲ ಬೆಚ್ಚನೆಯ ಅಪ್ಪುಗೆ ಅದು. "ನಿನ್ನ ದೇವತೆ ನಿನ್ನನ್ನು ರಕ್ಷಿಸುತ್ತಾಳೆ ಮಗು. ತನ್ನ ಪ್ರಾಣ ಕೊಟ್ಟಾದರೂ ನಿನ್ನನ್ನು ಕಾಪಾಡುತ್ತಾಳೆ ಇದು ಖಂಡಿತ."

ಮಗುವಿನ ಕಣ್ಣಂಚಿನಿಂದ ಜಾರಿದ ನೀರು ಕೆನ್ನೆಯ ಮೂಲಕ ಇಳಿದಿ ಹೋಯಿತು. "ನಂಗೆ ನಿಜಕ್ಕೂ ಅಳು ಬರುತ್ತಿದೆ ದೇವರೆ, ಏಕೆಂದರೆ ನನಗಿನ್ನು ನಿನ್ನನ್ನು ನೋಡಲು ಸಾಧ್ಯವಿಲ್ಲ." ಆಗ ದೇವರಿಗೂ ಕೂಡ ದುಃಖ ಉಮ್ಮಳಿಸಿ ಬಂತು. ಮತ್ತೊಮ್ಮೆ ಆ ಮಗುವ ಬಿಗಿದಪ್ಪಿ ಮುದ್ದಾಡಿದ. "ನಾನು ಯಾವತ್ತಿಗೂ 'ಅವಳ' ರೂಪದಲ್ಲಿ ನಿನ್ನ ಜೊತೆಗಿರುತ್ತೇನೆ. 'ಅವಳು' ಸದಾ ನನ್ನ ಬಗ್ಗೆ ನಿನಗೆ ಹೇಳುತ್ತಿರುತ್ತಾಳೆ. ಅಷ್ಟೇ ಅಲ್ಲ, ನೀನು ನನ್ನನ್ನು ಪುನಃ ಸೇರುವುದು ಹೇಗೆ ಅಂತಲೂ ಹೇಳಿಕೊಡುತ್ತಾಳೆ."

ಅಷ್ಟೊತ್ತಿಗೆ ಸ್ವರ್ಗದಲ್ಲಿ ಮೌನ ಆವರಿಸಿತು. ಭೂಮಿಯ ಮೇಲಿನ ಗದ್ದಲ ಮಗುವಿಗೆ ಕೇಳಲಾರಂಭಿಸಿತು. ಅವಸರದಲ್ಲಿ ಮಗು ದೇವರನ್ನು ಪ್ರಶ್ನಿಸಿತು "ದೇವರೆ, ಇನ್ನೇನು ನಾನು ನಿನ್ನನ್ನು ಬಿಟ್ಟು ಹೋಗುತ್ತಿದ್ದೇನೆ. ನನಗೆ ನನ್ನ ಪಾಲಿನ ದೇವತೆಯು ಹೆಸರನ್ನೊಮ್ಮೆ ಹೇಳುವೆಯಾ?"

ದೇವರು ಉತ್ತರಿಸಿದ: "ಆ ದೇವತೆಯ ಹೆಸರನ್ನು ತಿಳಿದುಕೊಂಡು ನೀನು ಮಾಡಬೇಕಾದ್ದೇನೂ ಇಲ್ಲ. ನೀನು ಅವಳನ್ನು ಕೇವಲ 'ಅಮ್ಮಾ' ಎಂದು ಕರೆ, ಅಷ್ಟು ಸಾಕು!"

ಕಾಮೆಂಟ್‌ಗಳು

Ravi Adapathya ಹೇಳಿದ್ದಾರೆ…
REALY GREAT ARTICAL
ವಿ.ರಾ.ಹೆ. ಹೇಳಿದ್ದಾರೆ…
excellent ! ದೇವರು ತನ್ನ ಸೃಷ್ಟಿಯನ್ನು ನೋಡಿಕೊಳ್ಳಲು ಎಲ್ಲಾ ಕಡೆ ತಾನು ಇರೋಕ್ಕಾಗಲ್ಲ ಅಂತ ಅಮ್ಮನನ್ನು ಸೃಷ್ಟಿಸಿದ ಅಂತಾರೆ. ಅದೆಷ್ಟು ನಿಜ ಅನ್ನಿಸಿಬಿಡತ್ತಲ್ವಾ?!

ಅದೇ ರೀತಿ ದೆವ್ವವೂ ಕೂಡ ತಾನೂ ಎಲ್ಲಾ ಕಡೆ ಇರೋಕ್ಕಾಗಲ್ಲ ಅಂತ ಗರ್ಲ್ ಫ್ರೆಂಡುಗಳನ್ನ ಸೃಷ್ಟಿಸಿತು ಅನ್ನೋದು ಸುಮ್ನೆ ಕುಹಕ ಅಷ್ಟೆ :)
ಅನಾಮಧೇಯಹೇಳಿದ್ದಾರೆ…
ಲೇಖನ ಚೆನ್ನಾಗಿದೆ. ತುಂಬಾ ಕ್ಯೂಟಾಗಿದೆ.
ಅನಾಮಧೇಯಹೇಳಿದ್ದಾರೆ…
amma said
excellent artical
kannada dalli kalisiddu nane
Shree ಹೇಳಿದ್ದಾರೆ…
really nice joshi very nice
ಅನಾಮಧೇಯಹೇಳಿದ್ದಾರೆ…
nice article..... but i feel something is missing......
ಅನಾಮಧೇಯಹೇಳಿದ್ದಾರೆ…
your feeling's about mother is very good ..... that's nice article......
mahesh ಹೇಳಿದ್ದಾರೆ…
nice... its really touching
ಅನಾಮಧೇಯಹೇಳಿದ್ದಾರೆ…
yalli kadyo??
ಅನಾಮಧೇಯಹೇಳಿದ್ದಾರೆ…
vav tumba chnagiddu nanna balya eddu bntu kno ta ta
sangita gowdaಹೇಳಿದ್ದಾರೆ…
really good ya........keep it up....
@kc@ಹೇಳಿದ್ದಾರೆ…
super

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ...
Merchant of death? It is, by now, a well known fact to the nation that the remark of Sonia Gandhi of the Congress party calling Modi “the merchant of death” during the campaign for Gujarat assembly elections acted as catalyst in favour of the Bharatiya Janata Party which eventually led to the triumphant victory of the latter in the elections. Well, that is not the core issue of this article, but truly the remark of Sonia Gandhi on Modi will be taken into account in the later part of this article. Indira Gandhi, the former Prime Minister of India ordered for a military expedition on Golden Temple of Amritsar which is the most sacred/holy place for the Sikhs. The military operation which targeted the Sikh terrorists who were sheltered in the Golden Temple under the leadership of Jarneil Singh Bhindranwale was aimed at eliminating the Sikh militancy from India and this military operation had been named “Operation Blue Star”. Indira Gandhi, in spite of aware of the fact that her life was u...

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her ...